6
  • Latest

ಈಶ್ವರ ಸನ್ನಿಧಿಯಲ್ಲಿ ವಾಮಾಚಾರ: ದೇವರ ಭೂಮಿ ಮೇಲೆ ದುಷ್ಟರ ಕಣ್ಣು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಈಶ್ವರ ಸನ್ನಿಧಿಯಲ್ಲಿ ವಾಮಾಚಾರ: ದೇವರ ಭೂಮಿ ಮೇಲೆ ದುಷ್ಟರ ಕಣ್ಣು!

AchyutKumar by AchyutKumar
in ವಿಡಿಯೋ

ಯಲ್ಲಾಪುರ: ಕದಂಬರ ಆಳ್ವಿಕೆಯಲ್ಲಿ ಸ್ಥಾಪಿತವಾದ ಈಶ್ವರ ದೇವಸ್ಥಾನದಲ್ಲಿ ವಾಮಾಚಾರ ನಡೆದಿದೆ. ದೇವಾಲಯದ ಎಲ್ಲಾ ಬಾಗಿಲು ಹಾಕಿದ್ದರೂ ಮೇಲ್ಚಾವಣಿ ಒಡೆದು ಒಳನುಗ್ಗಿದ ದುಷ್ಕರ್ಮಿಗಳು ವಾಮಾಚಾರದ ಪ್ರಯೋಗ ಮಾಡಿದ್ದಾರೆ.

ADVERTISEMENT

ಕಲ್ಮಠಕ್ಕೆ ತೆರಳುವ ರಸ್ತೆ ಮಾರ್ಗದಲ್ಲಿರುವ ಈಶ್ವರ ಗಲ್ಲಿಯಲ್ಲಿ ಅನಾಧಿಕಾಲದಿಂದಲೂ ಈಶ್ವರ ದೇವಾಲಯವಿದೆ. ಉಳುವಿಗೆ ಹೊರಟಿದ್ದ ಬಸವಣ್ಣವನರು ಸಹ ಈ ದೇವಾಲಯಕ್ಕೆ ಆಗಮಿಸಿ ಅಭಿಷೇಕ ಸೇವೆ ಮಾಡಿದ್ದರು ಎಂಬ ಮಾತು ಈ ದೇಗುಲಕ್ಕಿದೆ. ಆದರೆ, ಈ ಅನ್ಯರ ದಬ್ಬಾಳಿಕೆಯಿಂದ ಇಲ್ಲಿನ ಈಶ್ವರ ಲಿಂಗ, ನಾಗರ ಕಲ್ಲು ಹಾಗೂ ನಂದಿ ಮೂರ್ತಿ ಭಿನ್ನವಾಗಿದ್ದು, ಅದೆಲ್ಲವನ್ನು ನೂತನವಾಗಿ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಈ ನಡುವೆ ಕಿಡಿಗೇಡಿಗಳು ಪದೇ ಪದೇ ವಿಕೃತಿ ಮೆರೆಯುತ್ತಿರುವುದು ಆಡಳಿತ ಮಂಡಳಿಯವರ ತಲೆನೋವಿಗೆ ಕಾರಣವಾಗಿದೆ.

`ದಾಖಲೆಗಳ ಪ್ರಕಾರ ದೇವಾಲಯಕ್ಕೆ 4.5 ಗುಂಟೆ ಭೂಮಿ ಇದ್ದು ಕೆಲವು ಅತಿಕ್ರಮಣವಾಗಿದೆ. ಅದನ್ನು ದೇವಾಲಯಕ್ಕೆ ಬಿಟ್ಟುಕೊಡಿ ಎಂದು ಕೇಳಿರುವುದೇ ಸಮಸ್ಯೆಗೆ ಮೂಲ ಕಾರಣ’ ಎಂದು ದೇವಾಲಯ ಸಮಿತಿಯ ಕೃಷ್ಣಾನಂದ ದೇವನಳ್ಳಿ ಹಾಗೂ ಶಿವು ಕವಳಿ ಸುದ್ದಿಗಾರರಿಗೆ ವಿವರಿಸಿದರು. `ಕಿಡಿಗೇಡಿಗಳ ಪತ್ತೆಗಾಗಿ ಪ್ರಸ್ತುತ ಸಿಸಿ ಟಿವಿ ಅಳವಡಿಸಲಾಗಿದೆ. ಈ ಹಿಂದೆ ಸಹ ಸಾಕಷ್ಟು ಬಾರಿ ವಿವಿಧ ವಿಕೃತ ಪ್ರಯೋಗಗಳು ಇಲ್ಲಿ ನಡೆದಿದ್ದು, ಜ್ಯೋತಿಷ್ಯರ ಸಲಹೆ ಪ್ರಕಾರ ದೋಷ ನಿವಾರಣೆಗಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ’ ಎಂದವರು ವಿವರಿಸಿದರು. `ಪ್ರಸ್ತುತ ದೇವಾಲಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ’ ಎಂದು ಪ್ರಮುಖರಾದ ಸಂತೋಷ ಗುಡಿಗಾರ, ಸುಧೀರ ಕೋಡ್ಕಣಿ, ಶ್ರೀಪಾದ ಭಟ್ಟ ಮನವಿ ಮಾಡಿದರು.

Advertisement. Scroll to continue reading.

ಈ ವೇಳೆ ಸ್ಥಳಕ್ಕೆ ಬಂದ ಆ ಭಾಗದ ಕೆಲ ಜನ `ದೇವಾಲಯ ಕಮಿಟಿಯವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ’ ಎಂಬ ನಿಟ್ಟಿನಲ್ಲಿ ವಾಗ್ವಾದ ನಡೆಸಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಯಿತು. ವಾಮಾಚಾರ ನಡೆಸಿದ ಆರೋಪವನ್ನು ಕಮಿಟಿ ಸದಸ್ಯರು ತಮ್ಮ ಮೇಲೆ ಹೋರಿಸಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ `ಎಲ್ಲವನ್ನು ದೇವರು ನೋಡುತ್ತಿದ್ದಾನೆ. ನಮ್ಮ ಪ್ರಾಮಾಣಿಕತೆ ದೇವರಿಗೆ ಗೊತ್ತಿದೆ’ ಎನ್ನುತ್ತ ಎರಡು ಬಣದವರು ಮನೆಗೆ ತೆರಳಿದರು.

Advertisement. Scroll to continue reading.

ದೇವಾಲಯದಲ್ಲಿ ನಡೆದ ವಾಗ್ವಾದದ ವಿಡಿಯೋ ಇಲ್ಲಿ ನೋಡಿ..

 

 

 

Previous Post

ಹೆಬ್ಬಾರ್ ಸ್ವಕ್ಷೇತ್ರದಲ್ಲಿ ರೂಪಾಲಿ ಸಂಚಾರ: ಅಧಿಕಾರ ಇಲ್ಲದಿದ್ದರೂ ಕಡಿಮೆಯಾಗದ ಅಬ್ಬರ!

Next Post

ಕಿಡ್ನಿ ಕೈ ಕೊಟ್ಟಾಗ ಹೆದರಲಿಲ್ಲ.. ಲಿವರ್ ಹಾಳಾದಾಗ ಬಗ್ಗಲಿಲ್ಲ.. ಜ್ವರಕ್ಕೆ ಬೆದರಿ ಜೀವಬಿಟ್ಟ ಸತೀಶ!

Next Post

ಕಿಡ್ನಿ ಕೈ ಕೊಟ್ಟಾಗ ಹೆದರಲಿಲ್ಲ.. ಲಿವರ್ ಹಾಳಾದಾಗ ಬಗ್ಗಲಿಲ್ಲ.. ಜ್ವರಕ್ಕೆ ಬೆದರಿ ಜೀವಬಿಟ್ಟ ಸತೀಶ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ