ಕಾರವಾರ: ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಶಿವಾಜಿ ಬಾಲ ಮಂದಿರ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಬಾಲಕರ ವಿಭಾಗದಲ್ಲಿ ಅನುಷ್ ಎ ನಾಯ್ಕ 200 ಮೀ ಓಟದಲ್ಲಿ ದ್ವಿತೀಯ, ಚಕ್ರ ಎಸೆತದಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಆದಿತ್ಯ ಪಾಟೀಲ 3 ಸಾವಿರ ಮೀಟರ್ ಓಟದಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಪ್ರಜ್ವಲ ವರ್ಮಾ 400 ಮೀ ಹರ್ಡಲ್ಸಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಉಮಾ ಪಾಟೀಲ ಎತ್ತರ ಜಿಗಿತದಲ್ಲಿ ಪ್ರಥಮ, ವೈಭವಿ ಎಸ್ ನಾಯ್ಕ 100 ಮೀ ಹರ್ಡಲ್ಸಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸ್ನೇಹಾ ಬೇರಾ ಸಹ ಎತ್ತರ ಜಿಗಿತದಲ್ಲಿ ಮೊದಲಿಗರಾಗಿ ಸಾಧನೆ ಮಾಡಿದ್ದಾರೆ. ಬಾಲಕರ ವಿಭಾಗದ ಅಭಿಷೇಕ್ ಶೇಟ್ ಅವರ ವಾಲಿಬಾಲ್ ತಂಡ ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ದೈಹಿಕ ಶಿಕ್ಷಕ ಉಲ್ಲಾಸ ನಾಯ್ಕ ಅವರು ಈ ಮಕ್ಕಳಿಗೆ ತರಬೇತಿ ನೀಡಿದ್ದರು.
ಬಾಡ ಶಿವಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ ಪಿ ನಾಯ್ಕ, ಉಪಾಧ್ಯಕ್ಷ ಅಶೋಕ ನಾಯ್ಕ, ಕಾರ್ಯದರ್ಶಿ ಪ್ರಕಾಶ ರಾಣೆ, ಪ್ರಮುಖ ಪದಾಧಿಕಾರಿಗಳಾದ ಎಸ್ ಡಿ ಕದಂ, ಕಿಶೋರ ರಾಣೆ, ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕ ವಿಠ್ಠೋಬಾ ನಾಯಕ, ಮುಖ್ಯಾಧ್ಯಾಪಕಿ ರೂಪಾ ಗಾಂವ್ಕರ್ ಹಾಗೂ ಪಾಲಕರು ಮಕ್ಕಳ ಸಾಧನೆಗೆ ಸಂತಸ ವ್ಯಕ್ತಪಡಿಸಿದರು.




