ಮುಂಡಗೋಡ: ಮುಡಸಾಲಿಯಲ್ಲಿ ಗದ್ದೆ ಕೆಲಸ ಮಾಡುತ್ತಿದ್ದ ರಾಮಕೃಷ್ಣ ದುರ್ಗಪ್ಪ ಲಕ್ಮಾಪುರ (45) ಅವರ ಮೇಲೆ ಕರಡಿ ದಾಳಿ ನಡೆಸಿದೆ.
ಮಂಗಳವಾರ ಅವರು ಗದ್ದೆಯಲ್ಲಿ ದುಡಿಯುತ್ತಿದ್ದರು. ಹಿಂದಿನಿoದ ಆಕ್ರಮಣ ನಡೆಸಿದ ಕರಡಿ ಕಚ್ಚಬಾರದ ಜಾಗಕ್ಕೆ ಕಚ್ಚಿದ್ದು, ನೋವು ಸಹಿಸಿಕೊಳ್ಳಲಾಗದೇ ರಾಮಕೃಷ್ಣ ಕೂಗಿದಾಗ ಜನ ಜಮಾಯಿಸಿದ್ದಾರೆ. ಆಗ ಕರಡಿ ಅಲ್ಲಿಂದ ಕಾಲ್ಕಿತ್ತಿದೆ. ಸರಿಯಾಗಿ ಕೂರಲು ಆಗದ ರೈತ ರಾಮಕೃಷ್ಣ ಅವರನ್ನು ಅಲ್ಲಿನ ಜನ ಹೊತ್ತು ಆಸ್ಪತ್ರೆಗೆ ಕರೆದೊಯಿದ್ದಾರೆ. ಪ್ರಸ್ತುತ ಅವರು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




