ಕಾರವಾರ: `ವಿಧಾನ ಪರಿಷತ್ ಸದಸ್ಯ ಹುದ್ದೆ ಮುಕ್ತಾಯದ ನಂತರ ನನ್ನ ರಾಜಕೀಯ ಜೀವನ ಸಹ ಕೊನೆಯಾಗಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹೇಳಿದ್ದಾರೆ.
ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ನನ್ನ 30 ವರ್ಷದ ರಾಜಕೀಯದಲ್ಲಿ ಎಂದಿಗೂ ಯಾರಿಗೂ ಅನ್ಯಾಯ ಮಾಡಿಲ್ಲ. ಜನ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ನಾನು ಹೋರಾಟ ಮಾಡುತ್ತ ಬಂದಿದ್ದು, ರಾಜಕೀಯವಾಗಿ ಬೆಳೆಯುವ ಉದ್ದೇಶದಿಂದ ಯಾವ ಹೋರಾಟವನ್ನು ನಡೆಸಿಲ್ಲ’ ಎಂದವರು ಹೇಳಿದರು. `ಪ್ರತಿ ಬಾರಿ ಹೋರಾಟಕ್ಕೆ ಇಳಿದಾಗಲು ನಾನು ಮುಂದೆ ರಾಜಕೀಯವಾಗಿ ಬೆಳೆಯಬೇಕು ಎಂದು ಈ ಹೋರಾಟ ಮಾಡಿದ್ದೇನೆ ಎಂದು ಕೆಲವರು ಹೇಳಿದರು. ಆದರೆ, ಇಂತಹ ಯಾವುದೇ ವಿಚಾರ ನನ್ನ ಬಳಿ ಇರಲಿಲ್ಲ’ ಎಂದು ಸ್ಪಷ್ಠಪಡಿಸಿದರು. `ನನಗೆ ರಾಜಕಾರಣ ಸಾಕು. ನನಗೆ ರಾಜಕಾರಣದಲ್ಲಿ ಬೆಳಯಬೇಕು ಎನ್ನುವ ಉದ್ದೇಶವಿಲ್ಲ. ಅದಕ್ಕೆ ಒತ್ತು ಕೊಡುವುದಿಲ್ಲ’ ಎಂದರು.
`30 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಪ್ರಾಮಾಣಿಕವಾಗಿ ರಾಜಕೀಯ ಮಾಡುತ್ತಿದ್ದು ಯಾರಿಗೂ ಅನ್ಯಾಯ ಮಾಡಿಲ್ಲ. ವಿರೋಧವನ್ನು ಕಟ್ಟಿಕೊಂಡಿಲ್ಲ’ ಎಂದರು. `ರಾಜಕೀಯ ಜೀವನದಲ್ಲಿ ವಿಧಾನ ಪರಿಷತ್ ಸದಸ್ಯನಾಗಿದ್ದು ಇದೇ ನನಗೆ ಕೊನೆ’ ಎಂದು ಹೇಳಿದರು.




