6
  • Latest

ಮಹಿಳಾ ಪ್ರಯಾಣಿಕರೇ ಕಳ್ಳರ ಟಾರ್ಗೇಟು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಮಹಿಳಾ ಪ್ರಯಾಣಿಕರೇ ಕಳ್ಳರ ಟಾರ್ಗೇಟು!

AchyutKumar by AchyutKumar
in ದೇಶ - ವಿದೇಶ

ಕೊಂಕಣ ರೈಲ್ವೆಯಲ್ಲಿ ಸಂಚರಿಸುವ ಪ್ರಯಾಣಿಕರನ್ನು ಗುರಿಯಾಗಿರಿಸಿಕೊಂಡ ಕಳ್ಳರು ರೈಲಿನಲ್ಲಿ ಸಂಚರಿಸುತ್ತಿದ್ದವರ ಹಣ ಹಾಗೂ ಮೊಬೈಲ್ ದೋಚಿದ್ದಾರೆ. ಕಳ್ಳರ ಕಾಟದ ಬಗ್ಗೆ ದೂರು ದಾಖಲಿಸಿಕೊಂಡ ರೈಲ್ವೆ ಪೊಲೀಸರು ಆ ದೂರನ್ನು ಜಿಲ್ಲಾ ಪೊಲೀಸ್ ಘಟಕ್ಕೆ ವರ್ಗಾಯಿಸಿದ್ದು, ಮೂರು ಪ್ರಕರಣಗಳಲ್ಲಿಯೂ ಮಹಿಳೆಯರೇ ಸಂತ್ರಸ್ತರು!

ADVERTISEMENT

ಮುoಬೈನ ಸುಶೀಲಾ ಓಂ ಪ್ರಕಾಶ ಮರ‍್ಯಾ ಅವರು ಅಗಸ್ಟ 18ರಂದು ನೇತ್ರಾವತಿ ರೈಲಿನಲ್ಲಿ ಸಂಚರಿಸುತ್ತಿದ್ದಾಗ ಕುಮಟಾ – ಕಾರವಾರ ನಡುವೆ ಅವರ ಮಂಗಲ ಸೂತ್ರವನ್ನು ಅಪಹರಿಸಿದ್ದಾರೆ. 85 ಸಾವಿರ ರೂ ಮೌಲ್ಯದ ಚಿನ್ನದ ಸರ ಅದಾಗಿದ್ದು, ಅದನ್ನು ಹುಡುಕಿಕೊಡುವ ಹೊಣೆ ಜಿಲ್ಲಾ ಪೊಲೀಸರಿಗೆವಹಿಸಲಾಗಿದೆ. ಮುಂಬೈಯ ಮಾಧವಿ ಅಶೋಕ ಮೋರೆ ಅವರು ಮಾರ್ಚ 7ರಂದು ಮಂಗಲದ್ವೀಪ್ ಎಕ್ಸಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದಾಗ ಅವರ ಬಳಿಯಿದ್ದ ಕಿವಿಯೋಲೆಯನ್ನು ಕಳ್ಳರು ಅಪಹರಿಸಿದ್ದಾರೆ. ಜೊತೆಗೆ 3 ಸಾವಿರ ರೂ ಹಣವೂ ಕಳ್ಳರ ಪಾಲಾಗಿದೆ. ಇದರೊಂದಿಗೆ ಜೂನ್ 25ರಂದು ಕೇರಳದ ಸಂಜನಾ ಅವರು ಪೂರ್ಣ ಎಕ್ಸಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದಾಗ ಅವರ ಬಳಿಯಿದ್ದ 10 ಸಾವಿರ ರೂ ಮೌಲ್ಯದ ಮೊಬೈಲ್ ಕಳ್ಳರು ದೋಚಿದ್ದಾರೆ.

ಈ ಮೂರು ಪ್ರಕರಣಗಳು ಕುಮಟಾ ವ್ಯಾಪ್ತಿಗೆ ಒಳಪಟ್ಟು ನಡೆದಿದೆ. ಜೊತೆಗೆ ಎಲ್ಲಾ ಕಳ್ಳತನಗಳು ಬೆಳಗ್ಗಿನ ಜಾವ 2ಗಂಟೆಯಿoದ 7 ಗಂಟೆಯ ಒಳಗೆ ನಡೆದಿದೆ. ದೂರುದಾರರು ಸಹ ಕುಮಟಾ ಭಾಗದಲ್ಲಿಯೇ ಕಳ್ಳತನ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಕುಮಟಾ ಪೊಲೀಸರಿಗೆ ಈ ಪ್ರಕರಣದ ತನಿಖೆ ನಡೆಸಲು ಅಧಿಕಾರ ನೀಡಲಾಗಿದೆ. ಹೀಗಾಗಿ ಮಹಿಳೆಯರ ಆಭರಣ ಹಾಗೂ ಹಣ ಹಿಂತಿರುಗಿಸುವುದರ ಜೊತೆ ಕಳ್ಳರನ್ನು ಸೆದೆಬಡಿಯುವ ಹೊಣೆ ಸಹ ಕುಮಟಾ ಪೊಲೀಸರದ್ದಾಗಿದೆ. ಈ ಹಿನ್ನಲೆ ಕೊಂಕಣ ರೈಲ್ವೆ ಮಾರ್ಗದ ಮೇಲೆ ಪೊಲೀಸರು ನಿಗಾ ಇರಿಸಿದ್ದು, ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸುತ್ತಿದ್ದಾರೆ.

Advertisement. Scroll to continue reading.
Advertisement. Scroll to continue reading.
Previous Post

ನವೆಂಬರ್ 1ರಿಂದ ಸಾಂಸ್ಕೃತಿಕ ಕಲರವ: ಯಲ್ಲಾಪುರದಲ್ಲಿ ಸಂಕಲ್ಪ ಉತ್ಸವ.. ಸಂಸ್ಕೃತಿಯ ಸುಗ್ಗಿ!

Next Post

ಸತ್ತವನ ಪರ್ಸಿನಲ್ಲಿ ಸಾವಿನ ರಹಸ್ಯ: ಸಾಲ ಕೊಟ್ಟವರಿಗೆ ಮರಳಿ ಸಿಕ್ಕಿದ್ದು ಚಾಲಕನ ಶವ!

Next Post
The secret of death in the deceased's purse The driver's body was returned to the lender

ಸತ್ತವನ ಪರ್ಸಿನಲ್ಲಿ ಸಾವಿನ ರಹಸ್ಯ: ಸಾಲ ಕೊಟ್ಟವರಿಗೆ ಮರಳಿ ಸಿಕ್ಕಿದ್ದು ಚಾಲಕನ ಶವ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ