ದಾಂಡೇಲಿ: ದಮನಗರದ ಸೋಮಾನಿ ವೃತ್ತದ ಬಳಿಯ ಗ್ಯಾರೇಜಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದ್ವಿಚಕ್ರ ವಾಹನಕ್ಕೆ ತಗುಲಿದ ಬೆಂಕಿ ದೊಡ್ಡ ಜ್ವಾಲೆಯಾಗಿ ಹೊತ್ತಿ ಉರಿದಿದೆ.
ಮಂಗಳವಾರ ವ್ಯಕ್ತಿಯೊಬ್ಬರು ಅಶೋಕ ಮೇಸ್ತ್ರಿ ಗ್ಯಾರೇಜಿಗೆ ತಮ್ಮ ಹೊಂಡಾ ಆಕ್ಟಿವಾ ಸ್ಕೂಟಿ ನೀಡಿದ್ದರು. ಅದನ್ನು ದುರಸ್ತಿ ಮಾಡುವಂತೆ ಸೂಚಿಸಿ ಅಲ್ಲಿಂದ ತೆರಳಿದ್ದರು. ಅಶೋಕ ಮೇಸ್ತ್ರಿ ಆ ವಾಹನ ರಿಪೇರಿ ಮಾಡುತ್ತಿರುವಾಗ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿಯೇ ಅದು ಹೊತ್ತಿ ಉರಿದಿದೆ.
ಗ್ಯಾರೇಜಿನ ಸಿಬ್ಬಂದಿ ತಕ್ಷಣ ತಪ್ಪಿಸಿಕೊಂಡಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಿದರೂ ಸ್ಕೂಟರ್ ಉಳಿಯಲಿಲ್ಲ.




