ಶಿರಸಿ: ಕಾರವಾರ ತಾಲೂಕಿನ ಕಡವಾಡದ ಸತೀಶ್ ಎಂಬಾತರು ಶಿರಸಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮದ್ಯದ ಅಂಗಡಿಯಲ್ಲಿ ಸತೀಶ್ ಕೆಲಸ ಮಾಡುತ್ತಿದ್ದರು. ಮಂಗಳವಾರ ಅವರು ಕೆಲಸಕ್ಕೆ ಹೋಗಿರಲಿಲ್ಲ. ಹೊಸಪೇಟೆ ರಸ್ತೆಯ ಕೋಣೆಯಲ್ಲಿ ವಾಸವಾಗಿದ್ದ ಅವರು ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಮರಣ ಪತ್ರ ಬರೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬಾವಿಗೆ ಹಾರಿದ ಕೃಷಿಕ
ಶಿರಸಿ: ಎರಡು ವಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸರ್ವೇಶ್ವರ ಹೆಗಡೆ (56) ಬಾವಿಗೆ ಹಾರಿ ಜೀವ ಬಿಟ್ಟಿದ್ದಾರೆ.
ಮತ್ತಿಗಾರ ಹೊಸಮನೆಯಲ್ಲಿ ಮಂಗಳವಾರ ಅವರು ಬಾವಿಗೆ ಹಾರಿದ್ದು, ಸ್ಥಳೀಯರು ಶವ ಮೇಲೆತ್ತಿದರು. ಮಂಗಳವಾರ ಆಸ್ಪತ್ರೆಗೆ ಹೋಗಿ ಔಷಧೋಪಚಾರ ಮಾಡಿದ್ದರೂ ಸರ್ವೇಶ್ವರ ಹೆಗಡೆ ಸಮಾಧಾನಗೊಂಡಿರಲಿಲ್ಲ. ಮನೆಗೆ ಬಂದ ನಂತರವೂ ರೋಗದ ಬಗ್ಗೆ ಮಾತನಾಡಿ ಮಾನಸಿಕವಾಗಿ ನೊಂದುಕೊoಡಿದ್ದರು. ಅದಾದ ನಂತರ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.




