ಕುಮಟಾ: ಗೋಕರ್ಣದ ರಾಮತೀರ್ಥದ ಬಳಿ ವಿಹರಿಸುತ್ತಿದ್ದ ನಾಲ್ವರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಅವರು ಚಿಕಿತ್ಸೆಗೆ ದಾಖಲಾಗಿದ್ದಾರೆ.
ಸೋಮವಾರ ಸಂಜೆ ದೆಹಲಿಯಿಂದ ಮೂರು ಪ್ರವಾಸಿಗರು ಗೋಕರ್ಣಕ್ಕೆ ಆಗಮಿಸಿದ್ದರು. ಅವರು ರಾಮತೀರ್ಥದ ಬಳಿ ಸಂಚರಿಸುತ್ತಿದ್ದರು. ಇದರೊಂದಿಗೆ ವಿದೇಶಿ ಉಪನ್ಯಾಸಕರೊಬ್ಬರು ಅಲ್ಲಿ ಚಾರಣ ನಡೆಸುತ್ತಿದ್ದರು. ಅವರನ್ನು ಸೇರಿ ನಾಲ್ವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ.
ಜೇನು ದಾಳಿಯಿಂದ ಉಪನ್ಯಾಸಕ ಫ್ರಾನ್ಸಿನ ಅಲೆಕ್ಸಿಸ್ ಜರ್ರಿ (36) ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದು ಆರೋಗ್ಯಾಧಿಕಾರಿ ಡಾ ಜಗದೀಶ ನಾಯ್ಕ ಚಿಕಿತ್ಸೆ ನೀಡಿದರು.




