ಶಿರಸಿ: ಝರಾಕ್ಸ ಅಂಗಡಿ ನಡೆಸುತ್ತಿದ್ದ ಸುಪ್ರಸನ್ನ ನಗರದ ರಾಜು ನಾಯ್ಕ ಕಾರು ಅಪಘಾತದಲ್ಲಿ ಸಾವನಪ್ಪಿದ್ದಾರೆ.
ಅಕ್ಟೊಬರ್ 31ರ ನಸುಕಿನ 3 ಗಂಟೆಗೆ ಅವರು ಕುಮಟಾ ಶಿರಸಿ ಹೆದ್ದಾರಿಯಲ್ಲಿ ರಾಜು ಮಾಸ್ತಿ ನಾಯ್ಕ ಅವರು (40) ಕಾರು ಓಡಿಸುತ್ತಿದ್ದರು. ಕೊಳಗಿಬೀಸ್ ಬಳಿ ಕಾರು ತೀರಾ ಎಡಕ್ಕೆ ಸಂಚರಿಸಿದ್ದು, ಅಲ್ಲಿನ ಸೇತುವೆ ಕಟ್ಟೆಗೆ ಡಿಕ್ಕಿ ಹೊಡೆಯಿತು. ಗಾಯಗೊಂಡ ರಾಜು ಮಾಸ್ತಿ ನಾಯ್ಕ ಅವರನ್ನು ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಯಿತು.
ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೇರೆ ಕಡೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದರು. ಹೀಗಾಗಿ ಅಲ್ಲಿಂದ ಅವರನ್ನು ಟಿಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಪ್ರಯತ್ನಿಸಿದರೂ ರಾಜು ನಾಯ್ಕ ಅವರನ್ನು ಉಳಿಸಿಕೊಳ್ಳಲು ಸಾದ್ಯವಾಗಲಿಲ್ಲ. ಗುರುವಾರ 11.48ರ ವೇಳೆಗೆ ವೈದ್ಯರು ಅಪಘಾತದಲ್ಲಿ ಗಾಯಗೊಂಡ ರಾಜು ನಾಯ್ಕ ಸಾವನಪ್ಪಿರುವ ಬಗ್ಗೆ ಘೋಷಣೆ ಮಾಡಿದರು.
ಕುಮಟಾ ಪೈರಗದ್ದೆ ದೇವರಹಕ್ಕಲದಲ್ಲಿ ಜರಾಕ್ಸ ಅಂಗಡಿ ನಡೆಸುವ ರಾಜು ನಾಯ್ಕ ಅವರ ಅಳಿಯ ಅರುಣ ರಾಮ ನಾಯ್ಕ ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿ, ಶವ ಬಿಡಿಸಿಕೊಂಡರು.




