ಯಲ್ಲಾಪುರ: ಸಂಕಲ್ಪ ಉತ್ಸವದ ಎರಡನೇ ದಿನದ ಶನಿವಾರದ ವೇದಿಕೆಯಲ್ಲಿ ನಡೆದ ಭಜನೆ, ಗಮಕ ವಾಚನ, ಭರತನಾಟ್ಯ, ಸನ್ಮಾನ – ಸಭೆ ಹಾಗೂ ಯಕ್ಷಗಾನ ಪ್ರೇಕ್ಷಕರ ಗಮನ ಸೆಳೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಸಭಾ ಕಾರ್ಯಕ್ರಮಕ್ಕೂ ಮುನ್ನ ನಡೆದ ಗಮಕ ವಾಚನ ಹಾಗೂ ಸಭೆ ನಂತರ ನಡೆದ ಭರತನಾಟ್ಯ ಹಾಗೂ ಯಕ್ಷಗಾನವನ್ನು ಆಹ್ವಾದಿಸಿದರು. ಯಲ್ಲಾಪುರದ ಸೊಬಗನ್ನು ವ್ಯಕ್ತಪಡಿಸುವ ಕವನವನ್ನು ಅವರು ಪ್ರಸ್ತುತ ಪಡಿಸಿದರು. `ಕಲೆಯ ಆಸ್ವಾದನೆಗೆ ಸಂಕಲ್ಪ ಉತ್ತಮ ವೇದಿಕೆ’ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಜ್ಯೋತಿಷಿ ಗೋಪಾಲಕೃಷ್ಣ ಭಟ್ ಹಂಡ್ರಮನೆ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ, ಆದರ್ಶ ಸೊಸೈಟಿ ಅಧ್ಯಕ್ಷ ದತ್ತಾತ್ರೇಯ ಭಟ್ಟ, ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ ಮಾತನಾಡಿದರು. ಪತ್ರಕರ್ತ ಶಂಕರ ಭಟ್ಟ ತಾರೀಮಕ್ಕಿ, ಶಿಕ್ಷಕ ರಾಜಶೇಖರ ನಂದೊಳ್ಳಿ ಹಾಗೂ ಕೃಷಿಕ ಮಹೇಶ ಹೊಸಕೊಪ್ಪ ಅವರಿಗೆ ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಪ್ರಸ್ತಾಪಿಸಿದರು. ಸಂಕಲ್ಪ ಸೇವಾ ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಸ್ವಾಗತಿಸಿದರು.
ವನಿತಾ ಭಾಗ್ವತ ನಿರ್ವಹಿಸಿದರು. ಸುಜಯ ದುರಂಧರ ಪ್ರಾರ್ಥಿಸಿದರು. ರಾಮಚಂದ್ರ ಚಿಕ್ಯಾನಮನೆ ವಂದಿಸಿದರು. ನಂತರ ನಡೆದ `ಜ್ವಾಲಾ ಪ್ರತಾಪ’ ಯಕ್ಷಗಾನಕ್ಕೆ ಸಾವಿರಾರು ಜನ ಸಾಕ್ಷಿಯಾದರು. ಮುಕ್ತಾ ಶಂಕರ್ ಹಾಗೂ ಚಂದ್ರಕಲಾ ಭಟ್ಟ ಗಮಕ ವಾಚನ ಪ್ರದರ್ಶಿಸಿದರು.




