ಕಾರವಾರ: ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಗಜಾನನ ಗೌಡ ಅವರ ಶವ ಸಿಕ್ಕಿದೆ.
ನ 1ರಂದು ಗಜಾನನ ಗೌಡ ಮೀನುಗಾರಿಕೆಗೆ ತೆರಳಿದ್ದರು. ರಾತ್ರಿಯಾದರೂ ಅವರು ಮನೆಗೆ ಮರಳಿರಲಿಲ್ಲ. ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಶನಿವಾರ ಅವರ ಶವ ಲೇಡಿಸ್ ಕಡಲತೀರದಲ್ಲಿ ಪತ್ತೆಯಾಗಿದೆ. ಮೀನುಗಾರರು ಅಲ್ಲಿಗೆ ತೆರಳಿ ದೋಣಿ ಮೂಲಕ ಶವವನ್ನು ಬೈತಖೋಲ್’ಗೆ ತಂದಿದ್ದಾರೆ.
ಕಾಲು ಜಾರಿ ನೀರಿಗೆ ಬಿದ್ದ ಗಜಾನನ ಗೌಡ ಅವರನ್ನು ಕರಾವಳಿ ಕಾವಲು ಪಡೆಯವರು ಹುಡುಕಾಟ ನಡೆಸಿದ್ದರು. ಸ್ಥಳೀಯ ಮೀನುಗಾರರು ಸಹ ದೋಣಿ ಮೂಲಕ ಅವರ ಪತ್ತೆಗೆ ಪ್ರಯತ್ನಿಸಿದ್ದರು. ಆದರೆ, ನಿನ್ನೆ ಸಿಗದ ಅವರು ಸಾವಿನ ನಂತರ ಪತ್ತೆಯಾಗಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆದ ನಂತರ ಪೊಲೀಸರು ಕುಟುಂಬದವರಿಗೆ ಶವ ಹಸ್ತಾಂತರಿಸಿದರು.




