ಶಿರಸಿ: ಮಳಗಿಯಿಂದ ಬಿಸಲಕೊಪ್ಪ ಕಡೆ ಹೊರಟಿದ್ದ ಬೈಕಿನ ಮುಂದಿನ ಚಕ್ರ ಪಂಚರ್ ಆದ ಪರಿಣಾಮ ಅಪಘಾತ ನಡೆದಿದ್ದು, ಈ ಅವಘಡದಲ್ಲಿ ಸೂರ್ಯಕಾಂತ ಮಹಾಬಲೇಶ್ವರ ನಾಯ್ಕ (54) ಸಾವನಪ್ಪಿದ್ದಾರೆ.
ಬೀಳೂರಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಸೂರ್ಯಕಾಂತ ನಾಯ್ಕ ಅವರು ಅ 27ರ ಸಂಜೆ ಅದೇ ಊರಿನ ಜಯಾನಂದ ರುದ್ರಪ್ಪ ನಾಯ್ಕ ಅವರ ಜೊತೆ ಬೈಕಿನಲ್ಲಿ ಹೊರಟಿದ್ದರು. ಬೈಕಿನ ಮುಂದಿನ ಚಕ್ರ ಪಂಚರ್ ಆದ ಪರಿಣಾಮ ಜಯಾನಂದ ನಾಯ್ಕ ಅವರು ಬೈಕಿನ ಮೇಲಿದ್ದ ನಿಯಂತ್ರಣ ಕಳೆದುಕೊಂಡರು. ಬೈಕ್ ಬಿದ್ದಿದ್ದರಿಂದ ಸೂರ್ಯಕಾಂತ ನಾಯ್ಕ ಅವರ ಜೊತೆ ಜಯಾನಂದ ನಾಯ್ಕರು ನೆಲಕ್ಕೆ ಅಪ್ಪಳಿಸಿ ಗಾಯಗೊಂಡಿದ್ದರು.
ಸೂರ್ಯಕಾoತ ನಾಯ್ಕ ಅವರ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಅವರನ್ನು ಕಾರವಾರದ ಕಿಮ್ಸ್’ಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ನಾಲ್ಕು ದಿನಗಳ ಕಾಲ ನಿರಂತರ ಚಿಕಿತ್ಸೆ ನೀಡಿದರೂ ಸೂರ್ಯಕಾಂತ ನಾಯ್ಕರು ಚೇತರಿಸಿಕೊಳ್ಳಲಿಲ್ಲ.
ನ 1ರ ರಾತ್ರಿ 11.22ಕ್ಕೆ ಅವರು ಸಾವನಪ್ಪಿದ ಬಗ್ಗೆ ವೈದ್ಯರು ಘೋಷಿಸಿದರು. `ತಂದೆ ಸಾವಿಗೆ ಬೈಕ್ ಓಡಿಸುತ್ತಿದ್ದ ಜಯಾನಂದ ನಾಯ್ಕರೇ ಕಾರಣ’ ಎಂದು ಸೂರ್ಯಕಾಂತ ಅವರ ಪುತ್ರ ಪ್ರವೀಣ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ.




