ಭಟ್ಕಳ: ಗೋವಾದಿಂದ ಕೇರಳಕ್ಕೆ ರೈಲಿನಲ್ಲಿ ಹೋಗುತ್ತಿದ್ದ ಉಡುಪಿಯ ಸಾಧಿಕ್ ಹಸನ್ ಮುರುಡೇಶ್ವರದಲ್ಲಿ ರೈಲಿನಿಂದ ಇಳಿದಿದ್ದು, ನಂತರ ಅವರಿಗೆ ರಿಕ್ಷಾ ಗುದ್ದಿದೆ. ಗಾಯಗೊಂಡ ಅವರು ಆರ್ ಎನ್ ಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಾಧಿಕ್ ಅವರು ನ 1ರ ರಾತ್ರಿ ಗೋವಾದಿಂದ ಕೇರಳಕ್ಕೆ ಹೋಗಲು ನೇತ್ರಾವತಿ ಎಕ್ಸಪ್ರೆಸ್ ರೈಲು ಹತ್ತಿದ್ದರು. ರೈಲಿನಲ್ಲಿ ಕೂರಲು ಜಾಗ ಇಲ್ಲದ ಕಾರಣ ಅವರು ನ 2ರ ಮುಂಜಾನೆ 2 ಗಂಟೆ ಅವಧಿಗೆ ಮುರುಡೇಶ್ವರದಲ್ಲಿ ಇಳಿದರು. ಹೆದ್ದಾರಿ ಕಡೆ ನಡೆದು ಹೋಗುತ್ತಿದ್ದ ಅವರಿಗೆ ತೆರ್ನಮಕ್ಕಿಯ ರಾಮಕೃಷ್ಣ ನಾಯ್ಕ ಹಿಂದಿನಿoದ ತಮ್ಮ ರಿಕ್ಷಾ ಗುದ್ದಿದ್ದಾರೆ.
ನೆಲಕ್ಕೆ ಬಿದ್ದು ಕೈ ಮುರಿದುಕೊಂಡ ಸಾಧೀಕ್ ಅವರ ಕಾಲು ಹಾಗೂ ಎದೆಗೆ ಸಹ ಪೆಟ್ಟಾಗಿದೆ. ಇದರಿಂದ ಆಸ್ಪತ್ರೆಗೆ ದಾಖಲಾದ ಅವರು ನಂತರ ಪೊಲೀಸ್ ದೂರು ನೀಡಿದ್ದಾರೆ.




