ಮುಂಡಗೋಡು: ಸಾರ್ವಜನಿಕ ಪ್ರದೇಶದಲ್ಲಿ ಹಣ ಹರಡಿಕೊಂಡು ಜೂಜಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಬಳಿಯಿದ್ದ 9730ರೂ ಹಣವನ್ನು ವಶಕ್ಕೆ ಪಡೆದಿದ್ದು, ಜೂಜುಕೋರರ ಬಳಿ ಕೋರ್ಟು-ಕಚೇರಿ ಅಲೆದಾಟಕ್ಕೂ ಕಾಸಿಲ್ಲ!
ನವೆಂಬರ್ 4ರ ರಾತ್ರಿ 8 ಗಂಟೆಗೆ ಕರಿಗನಕೊಪ್ಪದ ಸೋಮು ತಿಮ್ಮಣ್ಣ ಲಮಾಣಿ ಮನೆ ಅಂಚಿನ ಪ್ರದೇಶದಲ್ಲಿ ನಾಲ್ವರು ಜೂಜಾಡುತ್ತಿದ್ದರು. ಕೂಲಿ ಕೆಲಸ ಮಾಡುವ ಸುಭಾಷನಗರ ರಾಮು ಥಾವರಪ್ಪ ಲಮಾಣಿ, ಕರಗಿನಕೊಪ್ಪದ ಕುಮಾರ ರಾಮು ಲಮಾಣಿ, ಕುಮಾರ ಪಾಯಪ್ಪ ಚೌಹ್ವಾಣ ಜೊತೆ ಚಾಲಕ ನಾರಾಯಣ ನಾಗಪ್ಪ ಲಮಾಣಿ ಸಹ ಅಂದರ್ ಬಾಹರ್ ಆಡುವಲ್ಲಿ ಮಗ್ನರಾಗಿದ್ದರು.
ಪೊಲೀಸ್ ಉಪನಿರೀಕ್ಷಕ ಪರಶುರಾಮ ಮಿರ್ಜಗಿ ಅಲ್ಲಿ ಬಂದಿದ್ದು ಸಹ ಜೂಜುಕೋರರಿಗೆ ಗೊತ್ತಾಗಲಿಲ್ಲ. ಜೂಜಾಟಕ್ಕೆ ಬಳಸಿದ್ದ ಇಸ್ಪಿಟ್ ಎಲೆ ಹಾಗೂ ಹರಡಿಕೊಂಡಿದ್ದ ಹಣವನ್ನು ಜಪ್ತು ಮಾಡಿದ ಪೊಲೀಸರು ನಂತರ ಈ ನಾಲ್ವರನ್ನು ವಶಕ್ಕೆ ಪಡೆದರು. ನಂತರ ಅವರೆಲ್ಲರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.
ಹಣ ಕಟ್ಟಿ ಅಂದರ್ ಬಾಹರ್ ಆಡುತ್ತಿದ್ದರೆ ನೀವು ಫೋನ್ ಮಾಡಿ: 112




