ಹೊನ್ನಾವರ: ದುರ್ಗಾಕೇರಿಯಲ್ಲಿ ಮನೆ ಮುಂದಿನ ಗೇಟ್ ಬಳಿ ನಿಲ್ಲಿಸಿಟ್ಟ ಸ್ಕೂಟರ್ ಕಳ್ಳತನವಾಗಿದೆ.
ದುರ್ಗಾಕೇರಿಯ ಗಣಪತಿ ಸತ್ಯನಾರಾಯಣ ಶೇಟ್ (30) ಅವರು ಟಿವಿಎಸ್ ಜುಪಿಟರ್ ಸ್ಕೂಟರ್ ಹೊಂದಿದ್ದರು. ಅಕ್ಟೊಬರ್ 27ರಂದು ರಾತ್ರಿ 9 ಗಂಟೆಗೆ ಅದನ್ನು ಮನೆ ಮುಂದಿನ ಗೇಟಿನ ಬಳಿ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಅಲ್ಲಿ ಸ್ಕೂಟರ್ ಕಾಣಲಿಲ್ಲ.
ಅಂದಾಜು 70 ಸಾವಿರ ರೂ ಮೌಲ್ಯದ ಸ್ಕೂಟರ್ ಕಳೆದುಕೊಂಡ ಅವರು ಊರಿನ ಎಲ್ಲಾ ಕಡೆ ಅದರ ಹುಡುಕಾಟ ನಡೆಸಿದರು. 9 ದಿನಗಳ ಕಾಲ ಹುಡುಕಿದರೂ ಸ್ಕೂಟರ್ ಸುಳಿವು ಸಿಕ್ಕಿಲ್ಲ. ಹೀಗಾಗಿ ನ 5ರಂದು ಅವರು `ಕಳ್ಳನನ್ನು ಹುಡುಕಿ, ಸ್ಕೂಟರ್ ಮರಳಿಸಿ’ ಎಂದು ಕೇಳಿಕೊಂಡು ಪೊಲೀಸರ ಮೊರೆ ಹೋಗಿದ್ದಾರೆ.
#S News Digitel Advertisement: ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿ. ಸಿಸಿ ಕ್ಯಾಮರಾ ಅಳವಡಿಸಲು ಇಲ್ಲಿ ಫೋನ್ ಮಾಡಿ: 8431314190 (ಟೆಕ್ ಬೈಟ್ ಐಟಿ ಸೆಲ್ಯುಶನ್ ಎಜನ್ಸಿ)




