6
  • Latest

ಬಿಲ್ ಬಾಕಿ – ಪವರ್ ಕಟ್ | ಇಂದಿರಾ ಕ್ಯಾಂಟೀನ್’ಗೆ ಇಲ್ಲ ಬೆಳಕಿನ ಭಾಗ್ಯ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಿಲ್ ಬಾಕಿ – ಪವರ್ ಕಟ್ | ಇಂದಿರಾ ಕ್ಯಾಂಟೀನ್’ಗೆ ಇಲ್ಲ ಬೆಳಕಿನ ಭಾಗ್ಯ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಮನೆ ಮನೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ ಸರ್ಕಾರ ಕಡಿಮೆ ದರದಲ್ಲಿ ಆಹಾರ ವಿತರಿಸುವ ಇಂದಿರಾ ಕ್ಯಾಂಟೀನ್’ಗೆ ಅನುದಾನ ನೀಡಿಲ್ಲ. ಹೀಗಾಗಿ ಇಲ್ಲಿನ ನೌಕರರಿಗೆ ದೀಪಾವಳಿ ಕಾಸು ಸಿಕ್ಕಿಲ್ಲ. 10 ತಿಂಗಳಿನಿoದ ವೇತನವೂ ಆಗಿಲ್ಲ. ಇದೀಗ ವಿದ್ಯುತ್ ಬಿಲ್ ಪಾವತಿಗೂ ಗುತ್ತಿಗೆದಾರರ ಬಳಿ ಕಾಸಿಲ್ಲ!

ಶುಕ್ರವಾರ ಸಂಜೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಬಿಲ್ ಬಾಕಿ ಹಿನ್ನಲೆ ಇಂದಿರಾ ಕ್ಯಾಂಟೀನ್’ನ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ. ಹೀಗಾಗಿ ಶನಿವಾರ ಬೆಳಗ್ಗೆ ಇಡ್ಲಿ ಮಾಡಲು ಸಾಧ್ಯವಾಗಿಲ್ಲ. ಅದಾಗಿಯೂ, ಅಡುಗೆ ಸಿಬ್ಬಂದಿ ಶನಿವಾರ ಉಪ್ಪಿಟ್ಟು ಮಾಡಿ ಬಡಿಸಿದರು. ಮಧ್ಯಾಹ್ನ ಊಟಕ್ಕೆ ಮಸಾಲೆ ಅರೆಯಲು ವಿದ್ಯುತ್ ಇಲ್ಲದ ಕಾರಣ ಬೇಳೆ ಸಾರು ಮಾಡುವ ಬಗ್ಗೆ ನಿರ್ಧರಿಸಿದರು. ವಿದ್ಯುತ್ ಸಂಪರ್ಕ ಮರುಜೋಡಣೆ ಆಗದೇ ಇದ್ದಲ್ಲಿ ರಾತ್ರಿ ಊಟ ಸ್ಥಗಿತವಾಗುವ ಸಾಧ್ಯತೆಗಳಿದೆ.

ADVERTISEMENT
ADVERTISEMENT

ಯಲ್ಲಾಪುರದ ಇಂದಿರಾ ಕ್ಯಾಟೀನ್’ನಲ್ಲಿ ಪ್ರತಿ ಹೊತ್ತು 100ಕ್ಕೂ ಅಧಿಕ ಜನ ಆಹಾರ ಸೇವಿಸುತ್ತಾರೆ. ಮೂರು ಹೊತ್ತು ಇಲ್ಲಿ ಬರುವವರು ಬೇರೆ ಬೇರೆ ವ್ಯಕ್ತಿಗಳಾಗಿದ್ದು, ಭಾನುವಾರ ಆಹಾರ ಸೇವಿಸುವವರ ಪ್ರಮಾಣ ಹೆಚ್ಚು. ವಿದ್ಯುತ್ ಇಲ್ಲದ ಕಾರಣ ಅವರೆಲ್ಲರೂ ಇದೀಗ ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರೊಂದಿಗೆ ಸಿಬ್ಬಂದಿಗೆ ದೀಪಾವಳಿ ಹಬ್ಬಕ್ಕೂ ಸಂಬಳ ಆಗದ ಕಾರಣ ಕ್ಯಾಂಟೀನ್ ಕೆಲಸಗಾರರು ಹಬ್ಬವನ್ನು ಖುಷಿಯಿಂದ ಆಚರಿಸಲು ಸಾಧ್ಯವಾಗಿಲ್ಲ.

`ಅಗಸ್ಟ್ ತಿಂಗಳಿನಲ್ಲಿ ಎಲ್ಲಾ ಬಾಕಿ ಪಾವತಿಸಲಾಗಿದ್ದು, ಅದಾದ ನಂತರ ಅನುದಾನ ಬಂದಿರಲಿಲ್ಲ. ಹೀಗಾಗಿ ಸಮಸ್ಯೆ ಆಗಿದೆ. ಬಿಲ್ ಪಾವತಿಯ ಕಡತ ಜಿಲ್ಲಾಧಿಕಾರಿಗಳ ಟೇಬಲ್ ಮೇಲಿದ್ದು, ಅವರ ಸಹಿ ಆದ ನಂತರ ಹಣ ಸಿಗಲಿದೆ. ಮುಂದಿನ ವಾರ ಸಿಬ್ಬಂದಿ ವೇತನದ ಜೊತೆ ಎಲ್ಲಾ ಬಿಲ್ ಪಾವತಿ ಸಾಧ್ಯ’ ಎಂದು ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕ ರಂಜನ್ ಶೆಟ್ಟಿ ಹೇಳಿದ್ದಾರೆ.

Advertisement. Scroll to continue reading.
Advertisement. Scroll to continue reading.

`10400ರೂ ಬಿಲ್ ಬಾಕಿ ಹಿನ್ನಲೆ ಕ್ಯಾಂಟೀನ್ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದ್ದು, ಜನರ ಒತ್ತಾಯದ ಮೇರೆಗೆ ಪ್ರಸ್ತುತ ಮರುಸಂಪರ್ಕ ನೀಡುವ ಬಗ್ಗೆ ಚಿಂತಿಸಲಾಗಿದೆ. ಅದಾಗಿಯೂ ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಲ್ಲಿ ಕಠಿಣ ಕ್ರಮ ಅನಿವಾರ್ಯ’ ಎಂದು ಹೆಸ್ಕಾಂ ಅಧಿಕಾರಿ ರಮಾಕಾಂತ ನಾಯ್ಕ ತಿಳಿಸಿದರು.

#S News Digitel Advertisement: ಗುಣಮಟ್ಟದ ಊಟಕ್ಕಾಗಿ ಭೇಟಿ ಕೊಡಿ:  ಶ್ರೀಬಸವೇಶ್ವರ ರೊಟ್ಟಿ ಖಾನಾವಳಿ ಫೋ: 9741510408

ShareSendTweetShare
ADVERTISEMENT
Previous Post

ಒಂದು ಸಾವು: ಹಲವು ಅನುಮಾನ!

Next Post

ಕೊನೆಗೂ ಬದುಕಲಿಲ್ಲ ಅಗ್ನಿಯಲ್ಲಿ ಬೆಂದ ಜೀವ: ಮಹಿಳೆಯನ್ನು ಬಲಿ ಪಡೆದ ಬಚ್ಚಲು ಮನೆ ಬೆಂಕಿ!

Next Post

ಕೊನೆಗೂ ಬದುಕಲಿಲ್ಲ ಅಗ್ನಿಯಲ್ಲಿ ಬೆಂದ ಜೀವ: ಮಹಿಳೆಯನ್ನು ಬಲಿ ಪಡೆದ ಬಚ್ಚಲು ಮನೆ ಬೆಂಕಿ!

ಬಡಿತ ನಿಲ್ಲಿಸಿದ ಮಹಿಳೆಯ ಹೃದಯ

ಊರು ಸೇರುವ ಮೊದಲೇ ಬದುಕು ಮುಗಿಸಿದ ರೈಲ್ವೆ ಪ್ರಯಾಣಿಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.