ಕುಮಟಾ: ಎದೆನೋವು ಹಾಗೂ ತಲೆ ತಿರುಗುವ ರೋಗದಿಂದ ಬಳಲುತ್ತಿದ್ದ ದತ್ತ ಗಾವಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಳ್ವೆಕೊಡಿಯ ದತ್ತಾ ಕೃಷ್ಣ ಗಾವಡಿ (57) ಕೂಲಿ ಕೆಲಸ ಮಾಡಿ ಬದುಕುತ್ತಿದ್ದರು. ಕಳೆದ ಒಂದು ವರ್ಷದಿಂದ ಅವರು ಎದೆನೋವಿನಿಂದ ಬಳಲುತ್ತಿದ್ದರು. ಆಗಾಗ ತಲೆ ಸುತ್ತು ಬರುತ್ತಿದ್ದರಿಂದ ಅಸ್ವಸ್ಥರಾಗುತ್ತಿದ್ದರು. ಈ ಬಗ್ಗೆ ಮಂಗಳೂರು ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನು ಪಡೆದಿದ್ದರು.
ಆದರೆ, ಔಷಧಿ ಪಡೆದರೂ ಅವರ ರೋಗ ವಾಸಿ ಆಗಿರಲಿಲ್ಲ. ಈ ಹಿನ್ನಲೆ ಮಾನಸಿಕವಾಗಿ ನೊಂದಿದ್ದ ಅವರು ನ 15ರಂದು ಬಾವಿಗೆ ನೀರೆತ್ತಲು ಬಳಸುವ ಗಡಗಡೆಗೆ ಇದ್ದ ನೈಲಾನ್ ಹಗ್ಗಕ್ಕೆ ಉರುಳು ಹಾಕಿಕೊಂಡು ಸಾವನಪ್ಪಿದ್ದಾರೆ. ಅವರ ಅಣ್ಣ ನರಸಿಂಹ ಗಾವಡೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.




