6
  • Latest

ಕದಿಯೋದೇ ಇವರ ಬಿಸಿನೆಸ್ಸು.. ಕುಡಿಯೋದು ಅವರ ವೀಕನೆಸ್ಸು!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ADVERTISEMENT
  • Home
Saturday, July 25, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕದಿಯೋದೇ ಇವರ ಬಿಸಿನೆಸ್ಸು.. ಕುಡಿಯೋದು ಅವರ ವೀಕನೆಸ್ಸು!

ಇದು ಇನ್ನೊಂದು ಡೇರ್ - ಡೇವಿಲ್ - ಮುಸ್ತಾಪರ ಕಥೆ

AchyutKumar by AchyutKumar
in ಸ್ಥಳೀಯ

ದಾಂಡೇಲಿ: ಕಳೆದ ವಾರ ದಾಂಡೇಲಿಯಲ್ಲಿ ಸಿಕ್ಕಿಬಿದ್ದ ಮೂವರು ಕಳ್ಳರಿಗೆ ಕದಿಯೋದೇ ಮುಖ್ಯ ವೃತ್ತಿಯಾಗಿತ್ತು. ಇದನ್ನು ಹೊರತುಪಡಿಸಿ ಹಗಲಿನಲ್ಲಿ ಅಲ್ಲಿ-ಇಲ್ಲಿ ಕೂಲಿ ಕೆಲಸ, ಹಮಾಲಿ ಮಾಡಿ ವೇಷ ಮರೆಸಿಕೊಳ್ಳುತ್ತಿದ್ದರು. ಸಾಕಷ್ಟು ಬಾರಿ ಪೊಲೀಸರನ್ನೇ ಯಾಮಾರಿಸಿದ್ದ ಈ ಮೂವರು ಈ ಬಾರಿಯೂ ಮದ್ಯದ ಅಮಲಿನಲ್ಲಿರದಿದ್ದರೆ ಸಿಕ್ಕಿ ಬೀಳುತ್ತಿರಲಿಲ್ಲ.
ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ನಿಯನ್ ಧರ್ಮಕ್ಕೆ ಸೇರಿದ ಈ ಮೂವರನ್ನು ಒಂದಾಗಿಸಿದ್ದು ಅದೇ ಹಳೇ ದಾಂಡೇಲಿಯ ಮೂಲೆಯಲ್ಲಿರುವ ಕಾರು`ಬಾರು’. ಮಾರುತಿನಗರದ ಅಶೋಕ ಗುರವ್, ಫೈರೋಜ್ ಸತ್ತಾರ್ ಹಾಗೂ ಗಾಂಧೀನಗರದ ಮೈಕಲ್ ಬನ್ನಿ ಅಂದು ಸ್ನೇಹಿತರಾದವರು ಪ್ರತಿ ದಿನ ರಾತ್ರಿ ಒಂದೇ ಕಡೆ ಸೇರುತ್ತಿದ್ದರು. ಮುಂದಿನ ಕಳ್ಳತನದ ಬಗ್ಗೆ ಅವರು ಚರ್ಚಿಸಿ, ಅದಕ್ಕಾಗಿ ತಯಾರಿ ನಡೆಸುತ್ತಿದ್ದರು. ಯಾರೂ ಇಲ್ಲದ ಒಂಟಿಮನೆ, ದೇವಾಲಯಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದ್ದರು.
ಅವರವರ ನಡುವೆ ಸಣ್ಣಪುಟ್ಟ ಕಚ್ಚಾಟ ನಡೆದಾಗ ಮುನಿಸಿಕೊಂಡು ಬೇರೆಯಾಗುತ್ತಿದ್ದರು. ಆಗ ಪ್ರತಿಯೊಬ್ಬರು ಬೇರೆ ಬೇರೆಯಾಗಿ ಕಳ್ಳತನ ನಡೆಸಿ, ದಿನ ದೂಡುತ್ತಿದ್ದರು. ಮುನಿಸು ಮುಗಿದ ನಂತರ ಮತ್ತೆ ಬಾರಿನ ಮೂಲೆಯಲ್ಲಿ ಒಟ್ಟಿಗೆ ಕುಳಿತು ತಮ್ಮ ಕಳ್ಳತನದ ಸಾಧನೆಗಳ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದರು. ಹೀಗೆ ತಾವು ಮಾಡಿದ ಕಳ್ಳ ಸಾಧನೆಯ ಬಗ್ಗೆ ಹೇಳಿಕೊಳ್ಳುತ್ತಿರುವಾಗ ಅದನ್ನು ಆಲಿಸಿದ ವ್ಯಕ್ತಿಯೊಬ್ಬ ಆ ಬಗ್ಗೆ ಪೊಲೀಸರಿಗೆ ಹೇಳಿದ್ದು, ಅದೇ ನಶೆಯಲ್ಲಿದ್ದಾಗ ಪೊಲೀಸರು ಅವರ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರ ಮುಂದೆಯೂ ತಾವು ದೊಡ್ಡ ಸಾಧನೆ ಮಾಡಿದವರಂತೆ ಬಡಾಯಿ ಕೊಚ್ಚಿಕೊಂಡಿದ್ದಾರೆ. ನಶೆ ಇಳಿದ ಮೇಲೆ ಪೊಲೀಸರು ಲಾಟಿ ಋಚಿ ತೋರಿಸಿ, ಇನ್ನಷ್ಟು ಸತ್ಯ ಹೊರಹಾಕಿಸಿದ್ದಾರೆ.
ಪ್ರಸ್ತುತ ಪೊಲೀಸ್ ವಿಚಾರಣೆ ವೇಳೆ ಈ ಕಳ್ಳಸಂತೆ ತಂಡದಿoದ ಸ್ಪೋಟಕ ವಿಷಯಗಳ ಮಾಹಿತಿ ಹೊರಬಿದ್ದಿದ್ದು, ಅವರ ವಿರುದ್ಧ ದೋಷಾರೋಪಣ ಪಟ್ಟಿ ಸಿದ್ಧವಾಗುತ್ತಿದೆ.

ShareSendTweetShare
Previous Post

ಲೈಂಗಿಕ ಕಿರುಕುಳ ಪ್ರಕರಣ: ಯಡಿಯೂರಪ್ಪ ನಿರಾಳ

Next Post

ರಾಮ ಮಂದಿರ ಸ್ಪೋಟಕ್ಕೆ ಸಂಚು!

Next Post

ರಾಮ ಮಂದಿರ ಸ್ಪೋಟಕ್ಕೆ ಸಂಚು!

ಅಪಘಾತದಲ್ಲಿ ಗಾಯಗೊಂಡಿದ್ದ ಕೂಲಿಯಾಳು ಸಾವು

ಕುಸಿದು ಬಿದ್ದು ವ್ಯಾಪಾರಿ ಸಾವು

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.