ಮುಂಡಗೋಡ: ತಡರಾತ್ರಿಯವರೆಗೂ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. 16850ರೂ ಹಣದ ಜೊತೆ ಐದು ಜನ ಸಿಕ್ಕಿಬಿದ್ದಿದ್ದು, ಪೊಲೀಸರನ್ನು ಕಂಡ 7 ಜನ ಓಡಿ ಪರಾರಿಯಾಗಿದ್ದಾರೆ.
ನ 22ರ ನಸುಕಿನ 1 ಗಂಟೆಗೆ ಕರಿಗಿನಕೊಪ್ಪ ಗ್ರಾಮದ ದೇವರಕೆರೆ ಅಂಗಳದಲ್ಲಿ ಕಂಕಣವಾಡದ ನಿಂಗನಗೌಡ, ನಾರಾಯಣ ಲಮಾಣಿ, ಕಿರಣ ಲಮಾಣಿ, ರವಿ ಕಬನೂರು,ಹುಬ್ಬಳ್ಳಿ ರಸ್ತೆಯ ಮಲ್ಲು ಗೌಳಿ ಹಾಗೂ ಶಿಗ್ಗಾವ್ ಕೋಣನಕೇರಿಯ ಮಹಾಂತೇಶ ಮಾಸನಕಟ್ಟಿ ಇಸ್ಪಿಟ್ ಆಡುವಾಗ ಸಿಕ್ಕಿ ಬಿದ್ದಿದ್ದಾರೆ.
ಪೊಲೀಸರನ್ನು ಕಂಡ ಕರಗಿನಕೊಪ್ಪದ ಸಂತೋಷ ಖೀರಪ್ಪ ಲಮಾಣಿ, ಸಂತೋಷ ಚಂದ್ರಪ್ಪ ಲಮಾಣಿ, ಲಮಾಣಿತಾಂಡಾದ ಸಂತೋಷ ಮಂಗಳಪ್ಪ ಲಮಾಣಿ, ಕರಗಿನಕೊಪ್ಪದ ಕುಮಾರ ಲಮಾಣಿ, ಶಂಕರ ಲಮಾಣಿ, ಶಿಗ್ಗಾವಿನ ವಾಸು ಇಂದಳಕರ ಹಾಗೂ ಬಸಣ್ಣ ಬಾಲಣ್ಣನವರ ಓಡಿ ಪರಾರಿಯಾಗಿದ್ದಾರೆ.
ಪೊಲೀಸ್ ಉಪನಿರೀಕ್ಷಕ ಪರಶುರಾಮ ಮಿರ್ಜಗಿ ತಂಡದವರು ಈ ದಾಳಿ ನಡೆಸಿದ್ದರು.





