ಯಲ್ಲಾಪುರ: ಹೈಸ್ಕೂಲ್ ಹುಡುಗಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿದವರ ವಿರುದ್ಧ ದೂರು ದಾಖಲಾಗಿದ್ದು, ಸಂತ್ರಸ್ತೆಗೆ ಪೊಲೀಸರು ಧೈರ್ಯ ತುಂಬಿ ಸಾಂತ್ವಾನ ಹೇಳಿದ್ದಾರೆ.
ಮಂಚಿಕೇರಿ ಭಾಗದಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕಿಗೆ ನಂದನ್ ಎಂಬಾತ ಪರಿಚಯವಾಗಿದ್ದು, ಆಕೆಯನ್ನು ಆತ ಕಾಡಿಸುತ್ತಿದ್ದ. ಎರಡು ವಾರದ ಹಿಂದೆ ಬಾಲಕಿಯನ್ನು ನಂದನ್ ಜೊತೆ ಮತ್ತೆ ಇಬ್ಬರು ಸೇರಿ ಪುಸಲಾಯಿಸಿದ್ದರು. ಆಕೆಯ ಮೇಲೆ ಅತ್ಯಾಚಾರ ನಡೆದಿದ್ದು, ಸಂತ್ರಸ್ತ ಬಾಲಕಿ ಮಂಕಾಗಿದ್ದಳು.
ಈ ಬಗ್ಗೆ ಮನೆಯವರು ಪ್ರಶ್ನಿಸಿದಾಗ ಕ್ರೂರಕೃತ್ಯ ಬೆಳಕಿಗೆ ಬಂದಿದೆ. ಪೊಲೀಸ್ ದೂರು ನೀಡಲು ಸಹ ಬಾಲಕಿ ಭಯಗೊಂಡಿದ್ದು, ಮಹಿಳಾ ಪೊಲೀಸರು ಆಕೆಗೆ ಧೈರ್ಯ ತುಂಬಿದರು. ಆಪ್ತ ಸಮಾಲೋಚನೆ ಮೂಲಕ ನಡೆದ ಘಟನಾವಳಿಗಳ ಮಾಹಿತಿ ಪಡೆದರು.
ಕೊನೆಗೆ ಪಾಲಕರ ಸಮ್ಮುಖದಲ್ಲಿ ಬಾಲಕಿ ದೂರು ನೀಡಿದ್ದು, ಆರೋಪಿ ನಂದನ್ ಸಹಚರರ ಹೆಸರು, ವಿಳಾಸ ಗೊತ್ತಾಗಿಲ್ಲ. ಆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




