ಅಂಕೋಲಾ: ಲಾಡ್ಜಿನಲ್ಲಿ ವಾಸವಾಗಿದ್ದುಕೊಂಡು ಜ್ಯೋತಿಷ್ಯ ಹೇಳಿಕೊಂಡು ಜೀವಿಸಿದ್ದ ನಿಂಗಪ್ಪ ವಾಸ್ಟರ್ (60) ಎದೆನೋವಿನಿಂದ ಸಾವನಪ್ಪಿದ್ದಾರೆ.
ಹುಬ್ಬಳ್ಳಿ ಹನುಮಂತನಗರದ ನಿಂಗಪ್ಪ ವಾಸ್ಟರ್ 20 ವರ್ಷಗಳಿಂದ ಜೈಹಿಂದ್ ಲಾಡ್ಜಿನಲ್ಲಿ ವಾಸವಾಗಿದ್ದರು. ಜ್ಯೋತಿಷ್ಯ ಹೇಳಿಕೊಂಡು ಅವರು ಬದುಕಿದ್ದರು. ಡಿ 6ರಂದು ಅವರಿಗೆ ಎದೆನೋವು ಕಾಣಿಸಿತು.
ಅಲ್ಲಿದ್ದ ಜನ ಜ್ಯೋತಿಷಿಯನ್ನು ಆಸ್ಪತ್ರೆಗೆ ದಾಖಲು ಮಾಡಿದರು. ಆದರೂ, ಪ್ರಯೋಜನವಾಗಲಿಲ್ಲ. ಅವರ ಪುತ್ರ ಅಣ್ಣಪ್ಪ ವಾಸ್ಟರ್ ಪ್ರಕರಣ ದಾಖಲಿಸಿ ಶವ ಪಡೆದರು.




