ಕುಮಟಾ: ನರದ ಸಮಸ್ಯೆ ಹಾಗೂ ಎದೆನೋವಿನೊಂದಿಗೆ ಕಾಡುವ ಒಂಟಿತನದಿoದ ಬೇಸರಿಸಿಕೊಂಡ 74 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಮಟಾ ತಾಲೂಕಿನ ಮಿರ್ಜಾನ್ ತಾರಿಬಾಗಿಲು ಬಳಿಯ ಜಮಲಸಾಬ್ ಹಸನಸಾಬ್ (74) ಶನಿವಾರ ಶೌಚಾಲಯಕ್ಕೆ ಹೋದವರು ಹೊರಗೆ ಬಂದಿರಲಿಲ್ಲ. ಮನೆಯವರು ಬಾಗಿಲು ಒಡೆದು ನೋಡಿದಾಗ ಅವರು ಅಲ್ಲಿಯೇ ನೇಣಿಗೆ ಶರಣಾಗಿರುವುದು ಕಾಣಿಸಿದೆ.
ತಲೆಯಲ್ಲಿ ನರದ ಸಮಸ್ಯೆ, ಎದೆನೋವಿನಿಂದ ಅವರು ಬಳಲುತ್ತಿದ್ದರು. ತಮ್ಮ ಆರೋಗ್ಯದ ಬಗ್ಗೆಯೇ ಸದಾ ಚಿಂತೆಯಲ್ಲಿದ್ದರು. ಈ ನಡುವೆ ಒಂಟಿತನ ಕಾಡುತ್ತಿರುವುದಾಗಿಯೂ ಹೇಳಿಕೊಂಡಿದ್ದರು. ಬಚ್ಚಲುಮನೆಗೆ ಹೋದ ಅವರು ಅಲ್ಲಿನ ಜಂತಿಗೆ ನೈಲಾನ್ ಹಗ್ಗ ಬಳಸಿ ಕುತ್ತಿಗೆ ಸಿಕ್ಕಿಸಿಕೊಂಡಿದ್ದಾರೆ.




