ಹೊನ್ನಾವರ: ಶಾಸಕ ದಿನಕರ ಶೆಟ್ಟಿ ಅವರು ಸಂಚರಿಸುತ್ತಿದ್ದ ಕಾರಿಗೆ ಬೈಕ್ ಗುದ್ದಿದೆ. ಪರಿಣಾಮ ಬೈಕ್ ಸವಾರನ ತಲೆಗೆ ಪೆಟ್ಟಾಗಿದೆ.
ಭಾನುವಾರ ಶಾಸಕ ದಿನಕರ ಶೆಟ್ಟಿ ಅವರು ಹೊನ್ನಾವರದ ಕರ್ಕಿ ನಾಕದಲ್ಲಿನ ಹೊಟೇಲ್ ಬಳಿ ತೆರಳಿದ್ದರು. ಅಲ್ಲಿಂದ ಮರಳುವಾಗ ಕಾರನ್ನು ಹಿಂದೆ ತೆಗೆಯುತ್ತಿದ್ದು, ಈ ವೇಳೆ ಜೋರಾಗಿ ಬೈಕ್ ಓಡಿಸಿಕೊಂಡು ಬಂದ ಹಳದಿಪುರದ ಬಸ್ರಾಣಿಯ ನಾಗಪ್ಪ ಗೌಡ ಕಾರಿಗೆ ತನ್ನ ಬೈಕ್ ಗುದ್ದಿದರು. ಕಾರಿನ ಹಿಂಬಾಗಕ್ಕೆ ಬೈಕ್ ಗುದ್ದಿ ನಾಗಪ್ಪ ಗೌಡ ರಸ್ತೆ ಮೇಲೆ ಬಿದ್ದರು.
ಅಪಘಾತ ಆಗಿರುವುದನ್ನು ತಿಳಿದ ಶಾಸಕ ದಿನಕರ ಶೆಟ್ಟಿ ಕಾರಿನಿಂದ ಇಳಿದು ಗಾಯಾಳುವಿನ ಕ್ಷೇಮ ವಿಚಾರಿಸಿದರು. ಗಂಭೀರ ಗಾಯಗೊಂಡ ಹಿನ್ನಲೆ ತಾವೇ ಆತನನ್ನು ಆಸ್ಪತ್ರೆಗೆ ರವಾನಿಸಿದರು. ಗಾಯಾಳುವಿಗೆ ಚಿಕಿತ್ಸೆ ಮುಂದುವರೆದಿದೆ.




