ಸಿದ್ದಾಪುರ: ಮನೆಗೆ ಬರುವ ಅತಿಥಿಗಳಿಗೆ ಮದ್ಯ ಕುಡಿಸಿ ಕಾಸು ಪಡೆಯುತ್ತಿದ್ದ ಗಣೇಶ ನಾಯ್ಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಡೊಂಬೆ ಸರಕುಳಿಯ ಗಣೇಶ ನಾಯ್ಕ ಮನೆ ಮೇಲೆ ಡಿಸೆಂಬರ್ 7ರಂದು ಪೊಲೀಸ್ ನಿರೀಕ್ಷಕ ಜೆ ಬಿ ಸೀತಾರಾಮ ಅವರು ದಾಳಿ ನಡೆಸಿದರು. ಪೊಲೀಸರು ಪರಿಶೀಲನೆ ನಡೆಸಿದಾಗ ಅನಧಿಕೃತವಾಗಿ ಸಂಗ್ರಹಿಸಿದ್ದ ಮದ್ಯದ ಪ್ಯಾಕೇಟ್ ಸಿಕ್ಕಿದವು.
ಫಾಸ್ಟಫುಡ್ ಅಂಗಡಿ ಮೇಲೆಯೂ ದಾಳಿ
ಸಿದ್ದಾಪುರದ ಅತ್ತಿಕೊಪ್ಪದ ಪ್ರಶಾಂತ ನಾಯ್ಕ ಸಹ ತಮ್ಮ ಪಾಸ್ಟ್ ಪುಡ್ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರು. ಡಿ 6ರ ಸಂಜೆ ಕವಲಕೊಪ್ಪದಲ್ಲಿರುವ ಫಾಸ್ಟ್ಪುಡ್ ಅಂಗಡಿ ಮೇಲೆಯೂ ದಾಳಿ ನಡೆಸಿದ ಪೊಲೀಸರು ಅಲ್ಲಿದ್ದ ಮದ್ಯದ ಪ್ಯಾಕೇಟ್’ಗಳನ್ನು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.




