ಉತ್ತರ ಕನ್ನಡ ಜಿಲ್ಲೆಯಲ್ಲಿ ಮಟ್ಕಾ ಆಡಿಸುವವರ ಮೇಲೆ ಪೊಲೀಸ್ ದಾಳಿ ಮುಂದುವರೆದಿದೆ. ಈ ದಿನ ಭಟ್ಕಳದ ಸಂಶುದ್ಧೀನ್ ಸರ್ಕಲ್ ಬಳಿ ಇಬ್ಬರು ಕಾರವಾರದ ಸದಾಶಿವಗಡ ಬಳಿ ಒಬ್ಬರು ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ.
ಭಟ್ಕಳದ ಮುಟ್ಟಳ್ಳಿ ಗೌರಮಜ್ಜಿ ಮನೆ ಶಶಿಧರ ನಾಯ್ಕ ಸಂಶುದ್ಧೀನ್ ಸರ್ಕಲ್ ಬಳಿಯ ಮಂಜುನಾಥ ಹೊಟೇಲ್ ಬಳಿ ಮಟ್ಕಾ ಆಡಿಸುತ್ತಿದ್ದರು. ಪಿಎಸ್ಐ ನವೀನ ನಾಯ್ಕ ಅವರ ಮೇಲೆ ದಾಳಿ ನಡೆಸಿ ಜನರಿಂದ ಸಂಗ್ರಹಿಸಿದ್ದ 4700ರೂ ಹಣವನ್ನು ವಶಕ್ಕೆ ಪಡೆದರು.
ಕಾರವಾರದ ಸದಾಶಿವಗಡದ ಕಣಸಗಿರಿಯ ಮನೋಜಕುಮಾರ ರಾಣೆ ಸಹ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದರು. ಕಣಸಗೇರಿ ಮಹಾಮಾಯಿ ದೇವಾಲಯ ಬಳಿ ಮನೋಜಕುಮಾರ ಜೂಜಾಡಿಸುವಾಗ ದಾಳಿ ನಡೆಸಿದ ಚಿತ್ತಾಕುಲ ಪಿಎಸ್ಐ ಮಹಂತೇಶ ವಾಲ್ಮಿಕಿ 1200ರೂ ಹಣವನ್ನು ವಶಕ್ಕೆ ಪಡೆದರು. ಮಟ್ಕಾ ಆಟಕ್ಕಾಗಿ ಜನರಿಂದ ಸಂಗ್ರಹಿಸಿದ ಹಣವನ್ನು ಮನೋಜಕುಮಾರ್ ತಾವೇ ಇಟ್ಟುಕೊಳ್ಳುತ್ತಿರುವುದು ಸಹ ವಿಚಾರಣೆ ವೇಳೆ ಗೊತ್ತಾಯಿತು.
ಭಟ್ಕಳದ ತಲಗೇರಿ ಬೊಕ್ಕೆಮನೆಯ ಗಣೇಶ ನಾಯ್ಕ ಸಹ ಮಟ್ಕಾ ಆಡಿಸುವಾಗ ಪಿಎಸ್ಐ ಸೋಮರಾಜ ರಾತೋಡ್ ಬಳಿ ಸಿಕ್ಕಿ ಬಿದ್ದರು. ಸಂಶುದ್ಧೀನ್ ಸರ್ಕಲ್’ನ ದುರ್ಗಾ ಹೇರ್ ಕಟಿಂಗ್ ಬಳಿ ಗೂಡಂಗಡಿ ನಡೆಸುವ ಗಣೇಶ ನಾಯ್ಕ ಜೂಜಾಟಕ್ಕಾಗಿ ಜನರಿಂದ 950ರೂ ಹಣ ಸಂಗ್ರಹಿಸಿದ್ದರು. ಪಿಎಸ್ಐ ಮಹಂತೇಶ ವಾಲ್ಮಿಕಿ ದಾಳಿ ನಡೆಸಿ ಹಣವನ್ನು ವಶಕ್ಕೆ ಪಡೆದರು.
ಈ ಮೂರು ಪ್ರಕರಣದಲ್ಲಿ ಪೊಲೀಸರು ಹಣದ ಜೊತೆ ಮಟ್ಕಾ ಸಾಮಗ್ರಿಗಳನ್ನು ಜಪ್ತು ಮಾಡಿ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.




