ಯಲ್ಲಾಪುರ: 30 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿರುವ ಯಲ್ಲಾಪುರದ ನ್ಯಾಯವಾದಿ ಬೀಬಿ ಅಮೀನಾ ಶೇಖ್ ಅವರಿಗೆ ಶಿರಸಿಯ ನೆಮ್ಮದಿ ಕುಟೀರದಲ್ಲಿ ಮಂಗಳವಾರ ಸನ್ಮಾನಿಸಲಾಯಿತು.
ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ `WHR ಆರ್ ಕೆ ಪೌಂಡೇಶನ್’ ನಡೆಸಿದ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಲಾಯಿತು. ಬೀಬಿ ಅಮೀನಾ ಶೇಖ್ ಅವರು ಯಲ್ಲಾಪುರ ಪಟ್ಟಣ ಪಂಚಾಯತದ ಮಾಜಿ ಸದಸ್ಯರು. ತಮ್ಮ ಸದಸ್ಯತ್ವ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅವರು ಆದ್ಯತೆ ನೀಡಿದ್ದರು. ವಿವಿಧ ಸಂಘಟನೆಗಳ ಜೊತೆಗೂಡಿ ನೊಂದವರಿಗೆ ನೆರವು ನೀಡುತ್ತಿದ್ದಾರೆ. ವೃತ್ತಿಯಲ್ಲಿ ನ್ಯಾಯವಾದಿಯಾಗಿರುವ ಅವರು ಅನೇಕ ಸನ್ನಿವೇಶಗಳಲ್ಲಿ ಬಡವರಿಗೆ ಉಚಿತ ಕಾನೂನು ಸಲಹೆ ನೀಡುವ ಗುಣ ಹೊಂದಿದ್ದಾರೆ. ಪ್ರಸ್ತುತ WHR ಆರ್ಕೆ ಪೌಂಡೇಶನ್’ನ ವಿಶ್ವ ಮಾನವ ಹಕ್ಕುಗಳ ತಾಲೂಕಾ ಅಧ್ಯಕ್ಷರಾಗಿ ಅವರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡು ದಕ್ಷಿಣ ಕನ್ನಡ, ಹಾವೇರಿ, ಶಿವಮೊಗ್ಗ, ಧಾರವಾಡ, ದಾವಣಗೆರೆ ಸೇರಿ 7 ಜಿಲ್ಲೆಗಳ ಮಹಿಳಾ ಅಧ್ಯಕ್ಷೆಯಾಗಿರುವ ಅರ್ಚನಾ ಜಯಪ್ರಕಾಶ್ ನಾಯಕ ಅವರು ಬೀಬಿ ಅಮೀನಾ ಶೇಖ್ ಅವರ ಈ ಸೇವೆಯನ್ನು ಗುರುತಿಸಿದರು. `WHR ಆರ್ಕೆ ಪೌಂಡೇಶನ್ ಪರವಾಗಿ ಶಿರಸಿಯ ನೆಮ್ಮದಿ ಕುಟೀರದಲ್ಲಿ ಬೇಬಿ ಅಮೀನಾ ಶೇಖ್ ಅವರನ್ನು ಸನ್ಮಾನಿಸಿದರು. ದಕ್ಷಿಣ ಕನ್ನಡ, ಹಾವೇರಿ, ಶಿವಮೊಗ್ಗ, ಧಾರವಾಡ, ದಾವಣಗೆರೆ ಸೇರಿ ವಿವಿಧ ಜಿಲ್ಲೆಯ ಕಾನೂನು ಸಲಹೆಗಾರರು ಈ ಸನ್ಮಾನಕ್ಕೆ ಸಾಕ್ಷಿಯಾದರು.
ಸಂಘಟನೆಯ ಜಿಲ್ಲಾ ಸದಸ್ಯರಾದ ರವಿ ನಾಯ್ಕ, ಮಹೇಶ್ ಪೂಜಾರ್, ಚಂದ್ರಕಾoತ್ ಮರಾಠಿ, ನಾರಾಯಣ ಮರಾಠಿ, ಸತೀಶ್ ಗಾoವ್ಕರ್, ಜಿ ಟಿ ಶೇಟ್, ವಿನಾಯಕ ಮರಾಠಿ, ಶೀಲಾ ಮರಾಠಿ, ಟಿ ಪಿ ಆಯಿಷಾ, ಜುಬೇದಾ ಶೇಖ, ಗೀತಾ ಸಿದ್ದಿ, ಗಂಗಾ ಕೊಕರೇ ಹಾಗೂ ಅಶೋಕ್ ಶೇರುಗಾರ್, ಎನ್ ಎಂ ನಾಯ್ಕ ಇನ್ನಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನ್ಯಾಯವಾದಿ ಜಯಪ್ರಕಾಶ ನಾಯಕ ಹಾಗೂ ಸಂಘಟನೆಯ ಜಿಲ್ಲಾ ಮಟ್ಟದ ಸದಸ್ಯರು ಹಾಜರಿದ್ದರು.




