ಹಳಿಯಾಳ: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆ ಬುಧವಾರ ಎಲ್ಲಾ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾದರೂ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳು ರಜೆ ಮಾಡಿಲ್ಲ!
ಹಳಿಯಾಳ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪ ವಿಭಾಗ ಕಚೇರಿ ಸಿಬ್ಬಂದಿ ರಜೆಯಿದ್ದರೂ ಕಚೇರಿ ಬಾಗಿಲು ತೆರೆದರು. ಅಧಿಕಾರಿಗಳು ಸಹ ಕಚೇರಿಯಲ್ಲಿ ಹಾಜರಿದ್ದರು. ಅಲ್ಲಿರುವ ಕಡತಗಳ ಪರಿಶೀಲನೆ, ಅಗತ್ಯವಿದ್ದವರಿಗೆ ವಿತರಣೆ ಕಾರ್ಯವೂ ಜೋರಾಗಿ ನಡೆದಿತ್ತು.
`ಎಲ್ಲಾ ಸರ್ಕಾರಿ ಕಚೇರಿಗೆ ರಜೆ ಇರುವಾಗ ನಿಮಗೇನು ಕೆಲಸ?’ ಎಂದು ಮಾದ್ಯಮ ಪ್ರತಿನಿಧಿಯೊಬ್ಬರು ಪ್ರಶ್ನಿಸಿದರು. ಆಗ `ಅಧಿವೇಶನ ಕೆಲಸಕ್ಕಾಗಿ ಕಡತ ಹುಡುಕುತ್ತಿರುವೆ’ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ ಸತೀಶ ಅವರು ಉತ್ತರಿಸಿದರು. ಅದಾಗಿಯೂ ಕೆಲವರು ಅನುಮಾನವ್ಯಕ್ತಪಡಿಸಿದರು.





