ಶಿರಸಿ: ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ವಿನಯ ಹೆಗಡೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಕಾನಗೋಡು ಬಳಿಯ ಮಶಿಗದ್ದೆಯ ವಿನಯ ಹೆಗಡೆ (48) ಕಾನಗೋಡು ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದರು. ಡಿ 13ರ ಸಂಜೆ 7.15ರ ಸುಮಾರಿಗೆ ಅವರು ಜನರಿಂದ ಹಣ ಸಂಗ್ರಹಿಸುತ್ತಿದ್ದಾಗ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ ಅವರ ಮೇಲೆ ದಾಳಿ ನಡೆಸಿದರು.
ಆ ವೇಳೆ ವಿನಯ ಹೆಗಡೆ ಅವರು ಜನರಿಂದ ಸಂಗ್ರಹಿಸಿದ 1020ರೂ ಹಣ ಸಿಕ್ಕಿದೆ. ಅದರೊಂದಿಗೆ ಮಟ್ಕಾ ಸಂಖ್ಯೆ ಬರೆಯುತ್ತಿದ್ದ ಸಣ್ಣ ಸಣ್ಣ ಚೀಟಿ, ಬಾಲ್ಪೆನ್ನನ್ನು ಸಹ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.




