ಶಿರಸಿ: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಭಾಸ್ಕರ ಪಟಗಾರ ವಿರುದ್ಧ ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈಚೆಗೆ `ಪ್ರತ್ಯೇಕ ಜಿಲ್ಲೆಗೆ ಯತ್ನಿಸಿದರೆ ರಕ್ತಕ್ರಾಂತಿ’ ಎಂದು ಭಾಸ್ಕರ ಪಟಗಾರ ಹೇಳಿಕೆ ನೀಡಿದ್ದರು. `ಭಾಸ್ಕರ ಪಟಗಾರ ಅವ್ಯಾಚ್ಯ ಪದಗಳಿಂದ ನಿಂದಿಸಿದ್ದಾರೆ’ ಎಂದು ಅನಂತಮೂರ್ತಿ ಹೆಗಡೆ ಬೆಂಬಲಿಗರು ಹೇಳಿದ್ದರು. `ಭಾಸ್ಕರ ಪಟಗಾರ್ ಅವರು ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿದ್ದರು. ಪ್ರಸ್ತುತ `ಭಾಸ್ಕರ ಪಟಗಾರ ಅವರ ಬಂಧನವಾಗಬೇಕು’ ಎಂದು ಅನಂತಮೂರ್ತಿ ಹೆಗಡೆ ಪೊಲೀಸ್ ದೂರು ನೀಡಿದ್ದಾರೆ.
`ಪ್ರತ್ಯೇಕ ಜಿಲ್ಲೆ ಹೋರಾಟ ತನ್ನ ಒಬ್ಬನದಲ್ಲ. ನಮ್ಮ ಹೋರಾಟ ನಿರಂತರ’ ಎಂದು ಅನಂತಮೂರ್ತಿ ಹೆಗಡೆ ಈ ವೇಳೆ ಪುನರುಚ್ಚರಿಸಿದ್ದಾರೆ. `ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಬಾರದು’ ಎಂದು ಸಹ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.




