ಕುಮಟಾ: ಪತ್ರಕರ್ತರ ವಿರುದ್ಧ ಪ್ರಾಥಮಿಕ ತನಿಖೆ ನಡೆಸದೇ ಅನಗತ್ಯ ದೂರು ದಾಖಲಿಸಿರುವುದನ್ನು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಖಂಡಿಸಿದೆ. ಸತ್ಯಾಸತ್ಯತೆ ಪರಿಶೀಲಿಸಿ ಪೊಲೀಸ್ ಪ್ರಕರಣ ದಾಖಲಾಗುವ ಬಗ್ಗೆ ಸುತ್ತೋಲೆ ಹೊರಡಿಸುವಂತೆ ಗುರುವಾರ ಪೊಲೀಸ್ ಠಾಣೆಯ ಮೂಲಕ ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಪತ್ರ ರವಾನಿಸಿದ್ದಾರೆ.
`ಪತ್ರಕರ್ತರ ವಿರುದ್ಧ ರಾಜಕಾರಣಿಗಳು ಆರೋಪ ಮಾಡುವುದು ಇದೇ ಮೊದಲಲ್ಲ. ಪತ್ರಕರ್ತರನ್ನು ತಮ್ಮ ಹಿಡಿತದಲ್ಲಿರಿಸಿಕೊಳ್ಳುವುದಕ್ಕಾಗಿ ಮೊದಲಿನಿಂದಲೂ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಲಾಗುತ್ತಿದೆ. ಈಚೆಗೆ ಸುಪ್ರೀಂ ಕೋರ್ಟ ಸಹ ಪತ್ರಕರ್ತರು ಟೀಕೆ-ಟಿಪ್ಪಣಿ ಮಾಡಬಹುದು ಎಂಬ ಬಗ್ಗೆ ಅಭಿಪ್ರಾಯ ಮಂಡಿಸಿದ್ದು, ಅದಾಗಿಯೂ ರಾಜಕಾರಣಿಗಳು ತಮ್ಮ ಬೆಂಬಲಿಗರ ಮೂಲಕ ಸುಳ್ಳು ದೂರು ದಾಖಲಿಸುತ್ತಿದ್ದಾರೆ’ ಎಂದು ಆಗ್ನೇಲ್ ರೋಡ್ರಿಗಸ್ ದೂರಿದರು.
ಕುಮಟಾ ಪೊಲೀಸ್ ಠಾಣೆಯ ಎಎಸ್ಐ ಅರುಣ ಅವರು ಮನವಿ ಪಡೆದರು. ಪ್ರಮುಖರಾದ ಸುಧಾಕರ ನಾಯ್ಕ, ನಾಗೇಶ್ ಎಂ ಹುಲಸ್ವಾರ, ಶೇಷಗಿರಿ ಗೌಡ, ತ್ಯಾಗರಾಜ್ ಮುಕ್ರಿ, ಲಕ್ಮಿ ನಾಯ್ಕ ಇದ್ದರು.




