ಹೊನ್ನಾವರ: ಬೆಳಗ್ಗೆ 4 ಗಂಟೆಗೆ ಎದ್ದು ಕೆಲಸಕ್ಕೆ ಹೊರಟ ಗಂಗಾಧರ ಅಂಬಿಗ ಕಾಲುವೆಗೆ ಬಿದ್ದು ಸಾವನಪ್ಪಿದ್ದಾರೆ.
ಹೊನ್ನಾವರ ಮಾವಿನಹೊಳೆಯ ಗಂಗಾಧರ ಅಂಬಿಗ (36)ಡಿ 25ರ ನಸುಕಿನಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಬೈಕ್ ಮೇಲೆ ಹೊರಟ ಅವರು ಮಾವಿನಹೊಳೆ ಹೆದ್ದಾರಿಯನ್ನು ತಲುಪಿದ್ದರು. 5 ಗಂಟೆ ವೇಳೆಗೆ ರಸ್ತೆ ಅಂಚಿನಲ್ಲಿ ಅಂಬಿಗರ ಬೈಕ್ ನಿಂತಿದ್ದು, ಅವರು ಅಲ್ಲಿನ ಕಾಲುವೆಯಲ್ಲಿ ಬಿದ್ದಿದ್ದರು.
ಗಂಗಾಧರ ಅಂಬಿಗ ರಸ್ತೆ ಅಂಚಿನಲ್ಲಿ ಬಿದ್ದಿರುವುದನ್ನು ನೋಡಿದ ಜನ ಅವರ ಮನೆಗೆ ವಿಷಯ ಮುಟ್ಟಿಸಿದರು. ಗಂಗಾಧರ ಅವರ ತಾಯಿ ಸಾವಿತ್ರಿ ಅಲ್ಲಿಗೆ ಆಗಮಿಸಿ, ಗಂಗಾಧರ ಅಂಬಿಗರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಕರೆ ತಂದರು. ಪರಿಕ್ಷಿಸಿದ ವೈದ್ಯರು `ಈಗಾಗಲೇ ಗಂಗಾಧರ ಅಂಬಿಗ ಸಾವನಪ್ಪಿದ್ದಾರೆ’ ಎಂದು ಘೋಷಿಸಿದರು.
ಪೊಲೀಸ್ ಪ್ರಕರಣ ದಾಖಲಿಸಿ ಕುಟುಂಬದವರು ಶವ ಪಡೆದರು.




