ಕಾರವಾರ: ಅಸ್ನೋಟಿ ವಿದ್ಯಾ ಮಂದಿರದಲ್ಲಿರುವ ಮಕ್ಕಳು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಅವರು ಬರಿಗಾಲಿನಲ್ಲಿ ಓಡಾಡುವುದನ್ನು ನೋಡಿದ ಲಯನ್ಸ್ ಕ್ಲಬ್ ಮಕ್ಕಳ ಪಾದಕ್ಕೆ ಹೊಂದುವ ಪಾದರಕ್ಷೆ ಕೊಡಿಸಿದೆ.
ಲಯನ್ಸ ಕ್ಲಬ್ಬಿನ ಅಧ್ಯಕ್ಷ ವಿನಯಾ ನಾಯ್ಕ ಅವರು ವಿದ್ಯಾರ್ಥಿಗಳ ಬಳಕೆಗೆ ಬೂಟುಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು `ಮಕ್ಕಳ ವಿದ್ಯಾರ್ಜನೆಗೆ ನೆರವು ನೀಡಲು ಲಯನ್ಸ ಕ್ಲಬ್ ಸದಾ ಬದ್ಧವಾಗಿದೆ’ ಎಂದರು. ಉದ್ಯಮಿ ದಿನಕರ ಸಾಳುಂಕೆ, ಗ್ರಾ ಪಂ ಅಧ್ಯಕ್ಷ ಸಂಜಯ ಸಾಳುಂಕೆ, ಲಯನ್ಸ ಮಾಜಿ ಅಧ್ಯಕ್ಷ ಇಬ್ರಾಹಿಂ ಕಲ್ಲೂರು, ಪ್ರಮುಖರಾದ ನಾರಾಯಣ ದೇಸಾಯಿ, ಶಿವಾನಂದ ನಾಯ್ಕ ಮಾತನಾಡಿದರು.
ಅಸ್ನೋಟಿ ಶಿಕ್ಷಣ ಸಂಸ್ಥೆಯ ಉಮೇಶ್ ಸಾಳುಂಕೆ ಅಧ್ಯಕ್ಷತೆವಹಿಸಿ ಮಾತನಾಡಿ ವಿನಯಾ ನಾಯ್ಕ ಹಾಗೂ ವಿನೋದ ನಾಯ್ಕ ದಂಪತಿಯ ಕಾಳಜಿ ಬಗ್ಗೆ ಕೊಂಡಾಡಿದರು. ಪ್ರಮುಖರಾದ ಗಿರೀಶ ದೇಸಾಯಿ, ಫೈಲೆಟ್ ಸಾಯಿಶ್ರೀ ನಾಯ್ಕ, ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು. ಸಾನಿಯಾ ನಾಯ್ಕ ಸಂಗಡಿಗರು ನಾಡಗೀತೆ ಹಾಡಿದರು. ಗಣೇಶ ಬಿಷ್ಟಣ್ಣನವರ ಸ್ವಾಗತಿಸಿ, ನಿರ್ವಹಿಸಿದರು.




