ಶಿರಸಿ: ಮರಗುಂಡಿ ಗ್ರಾಮದಲ್ಲಿ ಸಾಗವಾನಿ ಮರ ಕಡಿದ ಅನಿಲ್ ಗೌಡರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಆತನಿಂದ 13 ಮರದ ತುಂಡು ಹಾಗೂ ಇನ್ನಿತರ ಜಲಾವುಗಳನ್ನು ವಶಕ್ಕೆ ಪಡೆದಿದ್ದಾರೆ.
ಅನಿಲ ಗೌಡ ಮರ ಕಡಿತ ನಡೆಸಿರುವ ಬಗ್ಗೆ ಬನವಾಸಿ ವಲಯ ಅರಣ್ಯಾಧಿಕಾರಿ ಭವ್ಯ ನಾಯ್ಕ ಅವರಿಗೆ ಮಾಹಿತಿ ದೊರೆತಿದ್ದು,ಅ ವರು ಉಪರಣ್ಯ ಸಂರಕ್ಷಣಾಧಿಕಾರಿ ಡಾ ಅಜ್ಜಯ್ಯ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಎಸ್ ನಿಂಗಾಣಿ ಅವರಿಗೆ ಮಾಹಿತಿ ರವಾನಿಸಿದರು. ಉಪವಲಯ ಅರಣ್ಯಾಧಿಕಾರಿ ರವೀಂದ್ರ ಕರ್ನಲ್, ಅರಣ್ಯ ಸಿಬ್ಬಂದಿ ಯಶೋಧ ನಾಯ್ಕ, ಮಾಲತೇಶ ವಿ ಬಾರ್ಕಿ, ಈರಣ್ಣ ಅಕ್ಕೂರು, ದಯಾನಂದ ಬೋರಕರ್ ಜೊತೆ ಅವರು ದಾಳಿ ನಡೆಸಿದರು.
ಅರಣ್ಯ ವೀಕ್ಷಕ ನರಸಿಂಹ ನಾಯ್ಕ, ರಮೇಶ ನಾಯ್ಕ, ಸುಭಾಶ ನಾಯ್ಕ, ನಾರಾಯಣ ನಾಯ್ಕ ಹಾಗೂ ವಾಹನ ಚಾಲಕ ಪರಶುರಾಮ ನಾಯ್ಕ ಮತ್ತು ಮಂಜುನಾಥ ನಾಯ್ಕ ಆರೋಪಿಯನ್ನು ಹಿಡಿದರು. ಪ್ರಕರಣದ ತನಿಖೆ ಮುಂದುವರೆದಿದೆ. ವಶಕ್ಕೆ ಪಡೆದ ನಾಟಾವನ್ನು ಡಿಪೋಗೆ ಸಾಗಿಸಲಾಗಿದೆ.




