ಹೊನ್ನಾವರ: ಶರಾವತಿ ಸೇತುವೆ ಮೇಲೆ ಮಂಗಳವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ಮೂವರು ಸಾವನಪ್ಪಿದ್ದಾರೆ. ಕೆಎಸ್ಆರ್ಟಿಸಿ ಬಸ್ಸು ಹಾಗೂ ಬೈಕಿನ ನಡುವೆ ಈ ಅಪಘಾತ ನಡೆದಿದೆ.
ಮಾವಿನಕೂರ್ವಾದ ರಾಘವೇಂದ್ರ ಗೌಡ (34), ಗೌರೀಶ ನಾಯ್ಕ (25), ಸಂಶಿ ನಾಯ್ಕ ಖರ್ವಾ (22) ಬೈಕಿನಲ್ಲಿ ಹೋಗುತ್ತಿದ್ದರು. ಅವರಿಗೆ ಐಷಾರಾಮಿ ಕೆಎಸ್ಆರ್ಟಿಸಿ ಬಸ್ಸು ಡಿಕ್ಕಿಯಾಗಿದೆ. ಬೆಳಗಿನ ಜಾವ 4 ಗಂಟೆಗೆ ಈ ಅಪಘಾತ ನಡೆದಿದ್ದು, ಬೈಕಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಕೆಎಸ್ಆರ್ಟಿಸಿ ಬಸ್ಸು ವಿಜಯಪುರದಿಂದ ಮಂಗಳೂರಿಗೆ ಹೊರಟಿತ್ತು. ಬಸ್ಸು ವೇಗವಾಗಿ ಸಂಚರಿಸಿದ್ದು, ಬೈಕಿಗೆ ಡಿಕ್ಕಿಯಾಯಿತು. ಈ ಅಪಘಾತದಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಪೆಟ್ಟಾಗಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.




