ಮುಂಡಗೋಡ: ಮೂತ್ರ ವಿಸರ್ಜನೆಗೆ ತೆರಳಿದ್ದ ಬಾಲಕಿಗೆ ಹಾವು ಕಚ್ಚಿದ್ದು, ಆಸ್ಪತ್ರೆ ಸೇರುವ ಮುನ್ನ ಬಾಲಕಿ ಜೀವ ಹೋಗಿದೆ.
ಮಯೂರಿ ಸುರೇಶ ಕುಂಬ್ಳೆಪ್ಪನವರ್ (4 ವರ್ಷ) ಎಂಬ ಬಾಲಕಿ ಮಂಗಳವಾರ ಮುಂಡಗೋಡದ ಮಾರಿಕಾಂಬಾ ನಗರದಲ್ಲಿನ ಅಂಗನವಾಡಿಗೆ ತೆರಳಿದ್ದರು. ಮೂತ್ರ ವಿಸರ್ಜನೆಗಾಗಿ ಅವರು ಅಂಗನವಾಡಿ ಹಿಂದಿನ ಅರಣ್ಯ ಪ್ರದೇಶದ ಬಳಿ ತೆರಳಿದ್ದು, ಅಲ್ಲಿ ವಿಷ ಜಂತು ಕಚ್ಚಿದೆ.
ಬಾಲಕಿಯ ಕಿರುಚಾಟ ನೋಡಿದ ನಂತರ ಅಂಗನವಾಡಿ ಸಿಬ್ಬಂದಿ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿಗೆ ಕರೆದೊಯ್ಯುವ ಪ್ರಯತ್ನವನ್ನು ನಡೆಸಿದ್ದಾರೆ. ಆದರೆ, ಕಿಮ್ಸ್ ತಲುಪುವ ಮೊದಲೇ ಮಯೂರಿ ಕೊನೆ ಉಸಿರೆಳೆದರು.
ಅದಾಗಿಯೂ ಮಯೂರಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಕಿಮ್ಸ್ ವೈದ್ಯರು ಸಾವಿನ ಘೋಷಣೆ ಮಾಡಿದರು.




