6
  • Latest

ಬಡವರಿಗಿಲ್ಲ ಮನೆ.. ಬೀದಿಗೆ ಇಲ್ಲ ಬೆಳಕು.. ಕಾಸು ಕೊಟ್ಟವರಿಗೆ ಕೊಳಕು ನೀರು!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ADVERTISEMENT
  • Home
Saturday, July 25, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಬಡವರಿಗಿಲ್ಲ ಮನೆ.. ಬೀದಿಗೆ ಇಲ್ಲ ಬೆಳಕು.. ಕಾಸು ಕೊಟ್ಟವರಿಗೆ ಕೊಳಕು ನೀರು!

AchyutKumar by AchyutKumar
in ರಾಜಕೀಯ

ಯಲ್ಲಾಪುರ: ಪಟ್ಟಣದಲ್ಲಿ ವಾಸಿಸುವ ಜನ ಕುಡಿಯುವ ನೀರಿಗಾಗಿ ಪ್ರತಿ ವರ್ಷ 1950ರೂ ತೆರಿಗೆ ಪಾವತಿಸುತ್ತಾರೆ. ಅದಾಗಿಯೂ ಪಟ್ಟಣ ಪಂಚಾಯತ ಮೂರು ದಿನಕ್ಕೆ ಒಮ್ಮೆ ಜನರಿಗೆ ಕೊಳಕು ನೀರು ಕುಡಿಸುತ್ತಿದೆ. ಗುರುವಾರ ಬೆಳಗ್ಗೆ ನಲ್ಲಿಯಲ್ಲಿ ಬಂದ ನೀರು ಹಿಡಿದ ಬಿಜೆಪಿಗರು ಅದನ್ನು ಪಟ್ಟಣ ಪಂಚಾಯತ ಅಧಿಕಾರಿ-ಸಿಬ್ಬಂದಿಗೆ ತೋರಿಸಿ ಪ್ರತಿಭಟಿಸಿದರು. ಕಲುಷಿತ ನೀರನ್ನು ಬಾಟಲಿಯಲ್ಲಿ ಹಿಡಿದು ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಬೀದಿ ದೀಪವೂ ಅಸ್ತವ್ಯಸ್ಥ
`ಎರಡು ವರ್ಷದ ಹಿಂದೆ ಪಟ್ಟಣದ ವಿವಿಧ ಕಡೆ ಬೀದಿ ದೀಪ ಅಳವಡಿಸಲಾಗಿದ್ದು, ರಾತ್ರಿ ವೇಳೆ ಅವು ಸರಿಯಾಗಿ ಬೆಳಗುತ್ತಿಲ್ಲ. ಬೆಲ್ ರಸ್ತೆ, ಶಿರಸಿ ರಸ್ತೆ, ಮುಂಡಗೋಡು ರಸ್ತೆ ಹಾಗೂ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಸುತ್ತ ಅಳವಡಿಸಿದ ದೀಪಗಳು ಪ್ರಯೋಜನಕ್ಕಿಲ್ಲ. ಇನ್ನೂ 50 ಬೀದಿ ದೀಪಗಳ ಅಗತ್ಯವಿದ್ದು, ಅದನ್ನು ಅಳವಡಿಸಿಲ್ಲ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗಿದ್ದು, ಅಧಿಕಾರಿಗಳ ಬೇಜವಬ್ದಾರಿಯಿಂದ ಸಾರ್ವಜನಿಕರಿಗೆ ಸೌಲಭ್ಯ ಸಿಗುತ್ತಿಲ್ಲ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಆಕ್ರೋಶವ್ಯಕ್ತಪಡಿಸಿದರು.

ಕಾಸು ಕೊಟ್ಟವರಿಗೆ ಸಿಕ್ಕಿಲ್ಲ ಮನೆ!
`ವಸತಿರಹಿತರಿಗಾಗಿ ಮಂಜುನಾಥ ನಗರದಲ್ಲಿ ಜಿ+2 ವಸತಿ ಕಟ್ಟಡ ನಿರ್ಮಿಸಲಾಗುತ್ತಿದೆ. 4-5 ವರ್ಷ ಕಳೆದರೂ ಕಟ್ಟಡ ಪೂರ್ಣಗೊಂಡಿಲ್ಲ. ಅದಾಗಿಯೂ ಮನೆ ಪಡೆಯಲು ಇಚ್ಚಿಸಿದವರಿಂದ 50 ಸಾವಿರ ಹಣ ಪಡೆದಿದ್ದು, ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡದೇ ಅನ್ಯಾಯ ಮಾಡಲಾಗಿದೆ’ ಎಂದು ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ದೂರಿದರು.

ಕಚೇರಿ ಮುಂದೆ ತಮಟೆ ಸದ್ದು!
`ಅವ್ಯವಸ್ಥೆಗಳ ಬಗ್ಗೆ ಸಾಕಷ್ಟು ದೂರು ನೀಡಿದರು ಅಧಿಕಾರದಲ್ಲಿರುವವರಿಗೆ ಕಿವಿ ಕೇಳುತ್ತಿಲ್ಲ’ ಎಂದು ಆರೋಪಿಸಿದ ಬಿಜೆಪಿಗರು ತಮಟೆ ಬಾರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣ ಪಂಚಾಯತ ಕಚೇರಿ ಮುಂದೆಯೂ ತಮಟೆ ಬಾರಿಸುವುದರ ಮೂಲಕ ಅಧಿಕಾರಿಗಳು ಕಚೇರಿ ಬಿಟ್ಟು ಹೊರಬರುವಂತೆ ಮಾಡಿದರು. ಅದಾದ ನಂತರ ಬೀದಿ ದೀಪ, ಕಲುಷಿತ ನೀರು ಹಾಗೂ ಬಡವರ ವಸತಿ ಸಮಸ್ಯೆ ಸೇರಿ ವಿವಿಧ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಲಿಖಿತವಾಗಿ ದೂರು ಸಲ್ಲಿಸಿದರು. `ಕಾಂಗ್ರೆಸ್ ಆಡಳಿತದ ಪಟ್ಟಣ ಪಂಚಾಯತ ಜನರ ನೋವಿಗೆ ಸ್ಪಂದಿಸುತ್ತಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.

ShareSendTweetShare
Previous Post

ಆತ ಬದುಕಿದ್ದು ಇಪ್ಪತ್ತೇಳೇ ವರ್ಷ: ರಕ್ತ ವಾಂತಿ ಮಾಡಿ ಸಾವನಪ್ಪಿದ ವ್ಯಸನಿ!

Next Post

ಗದ್ದೆಗೆ ಉರುಳಿದ ಸರ್ಕಾರಿ ಬಸ್ಸು!

Next Post

ಗದ್ದೆಗೆ ಉರುಳಿದ ಸರ್ಕಾರಿ ಬಸ್ಸು!

ಮರಕ್ಕೆ ಗುದ್ದಿದ ಟೆಂಪೋ: 24 ಜನರಿಗೆ ಗಾಯ!

ರಸ್ತೆ ನುಂಗಿದ ಅನಧಿಕೃತ ರೆಸಾರ್ಟ: ಜನಪ್ರತಿನಿಧಿಗಳ ಹೋರಾಟಕ್ಕೂ ಇಲ್ಲ ಬೆಲೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.