6
  • Latest

ರಸ್ತೆ ನುಂಗಿದ ಅನಧಿಕೃತ ರೆಸಾರ್ಟ: ಜನಪ್ರತಿನಿಧಿಗಳ ಹೋರಾಟಕ್ಕೂ ಇಲ್ಲ ಬೆಲೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಸ್ತೆ ನುಂಗಿದ ಅನಧಿಕೃತ ರೆಸಾರ್ಟ: ಜನಪ್ರತಿನಿಧಿಗಳ ಹೋರಾಟಕ್ಕೂ ಇಲ್ಲ ಬೆಲೆ!

AchyutKumar by AchyutKumar
in ಸ್ಥಳೀಯ

ಕುಮಟಾ: ಗೋಕರ್ಣ ಬಳಿಯ ಗಂಗೆಕೊಳ್ಳ ಹಾಗೂ ದುಬ್ಬನಶಸಿ ಪ್ರದೇಶದ ಸರ್ಕಾರಿ ಜಾಗದಲ್ಲಿ ಅನಧಿಕೃತ ಹೋಂ ಸ್ಟೇ ಹಾಗೂ ರೆಸಾರ್ಟ ಸಂಖ್ಯೆ ಹೆಚ್ಚಾಗಿದೆ. 80ಕ್ಕೂ ಅಧಿಕ ಹೋಂ ಸ್ಟೇ’ಗಳು ಇಲ್ಲಿದ್ದು ರಸ್ತೆ-ಗೋಮಾಳವನ್ನೆಲ್ಲ ಅವರು ಅತಿಕ್ರಮಿಸಿಕೊಂಡಿದೆ. `ಸಾರ್ವಜನಿಕರಿಗೆ ಆಗುವ ತೊಂದರೆ ಪರಿಗಣಿಸಿ ಇದನ್ನು ತೆರವು ಮಾಡಬೇಕು’ ಎಂದು ನಾಡುಮಾಸ್ಕೇರಿ ಗ್ರಾಮ ಪಂಚಾಯತ ನಿರಂತರವಾಗಿ ಪತ್ರ ಬರೆದರೂ ಕಂದಾಯ ಇಲಾಖೆ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಒಂದು ವಾರದ ಒಳಗೆ ಅನಧಿಕೃತ ಕಟ್ಟಡಗಳನ್ನು ತೆರವು ಮಾಡದೇ ಇದ್ದರೆ ಪಂಚಾಯತನ ಎಲ್ಲಾ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.

ಸಮುದ್ರ ಕಿನಾರೆ ಸೇರಿ ವಿವಿಧ ಕಡೆ ಅನಧಿಕೃತ ಹೋಂ ಸ್ಟೇ’ಗಳಿಂದ ಸಮಸ್ಯೆ ಆಗುತ್ತಿರುವ ಬಗ್ಗೆ ಆ ಭಾಗದ ಅನೇಕರು ಗ್ರಾಮ ಪಂಚಾಯತಗೆ ದೂರು ಸಲ್ಲಿಸಿದ್ದಾರೆ. ಗ್ರಾಮ ಪಂಚಾಯತದ ಸಾಮಾನ್ಯ ಸಭೆಯಲ್ಲಿ ಸಹ ಅನಧಿಕೃತ ಹೋಂ ಸ್ಟೇ’ಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ಜನಪ್ರತಿನಿಧಿಗಳು ವಿವರಿಸಿದ್ದಾರೆ. ಈ ಎಲ್ಲಾ ದೂರು ಪರಿಶೀಲಿಸಿದ ಗ್ರಾ ಪಂ ಅಧ್ಯಕ್ಷ ಈಶ್ವರ ಗೌಡ ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡದ ಬಗ್ಗೆ ಹೆಸ್ಕಾಂ’ಗೆ ಪ್ರಶ್ನಿಸಿದ್ದಾರೆ. ಅದಾದ ನಂತರ ಜಾಗದ ಗಡಿ ಗುರುತಿನ ಬಗ್ಗೆ ಮಾಹಿತಿ ನೀಡುವಂತೆ ಈಶ್ವರ ಗೌಡ ಅವರು ಭೂ ಮಾಪನಾ ಇಲಾಖೆಗೆ ಪತ್ರ ಬರೆದಿದ್ದಾರೆ. ಸರ್ಕಾರಿ ಭೂಮಿ ಅತಿಕ್ರಮಣ ನಡೆದ ಬಗ್ಗೆ ಗ್ರಾಮ ಪಂಚಾಯತದ ಅಧಿಕೃತ ಪತ್ರದಲ್ಲಿ ತಹಶೀಲ್ದಾರರಿಗೆ ಸಹ ಲಿಖಿತವಾಗಿ ತಿಳಿಸಿದ್ದಾರೆ. ಅದಾಗಿಯೂ ಅಕ್ರಮ ನಡೆಸುವವರ ವಿರುದ್ಧ ಯಾವುದೇ ಕ್ರಮವಾಗಿಲ್ಲ. ಅನಧಿಕೃತ ಕಟ್ಟಡಗಳು ತೆರವಾಗಿಲ್ಲ.

ಈ ಹಿನ್ನಲೆ ಪ್ರಸ್ತುತ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಅವರನ್ನು ಭೇಟಿ ಮಾಡಿದ ಗ್ರಾ ಪಂ ಸದಸ್ಯರು `ಅನಧಿಕೃತ ಹೋಂ ಸ್ಟೇ ತೆರವು ಆಗದೇ ಇದ್ದರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ’ ಎಂದು ಎಚ್ಚರಿಸಿದ್ದಾರೆ. ಇದಕ್ಕೆ ಒಂದು ವಾರದ ಗಡುವುನ್ನು ನೀಡಿದ್ದಾರೆ. `ಈಗಾಗಲೇ ಕಂದಾಯ, ಸಿಆರ್‌ಜಡ್, ಹೆಸ್ಕಾಂ ಸೇರಿ ಎಲ್ಲಾ ಕಡೆ ದೂರು ನೀಡಲಾಗಿದೆ. ಅದಾಗಿಯೂ ಯಾವುದೇ ಕ್ರಮವಾಗಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

`ಅನಧಿಕೃತ ರೆಸಾರ್ಟಿನವರು ಇಕ್ಕಟ್ಟಾದ ರಸ್ತೆಯನ್ನು ಅತಿಕ್ರಮಿಸಿದ್ದಾರೆ. ವಾಹನ ನಿಲುಗಡೆ, ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಹೊರ ರಾಜ್ಯದ ಅನೇಕರು ಇಲ್ಲಿ ನಿಯಮಬಾಹಿರವಾಗಿ ಹೊಟೇಲ್ ನಡೆಸುತ್ತಿದ್ದು, ಅವರ ಹಿನ್ನಲೆ ಬಗ್ಗೆ ಅರಿವಿಲ್ಲ’ ಎಂದು ಗ್ರಾ ಪಂ ಸದಸ್ಯರು ಕಳವಳವ್ಯಕ್ತಪಡಿಸಿದರು. ಸಮಸ್ಯೆ ಆಲಿಸಿದ ಕಲ್ಯಾಣಿ ಕಾಂಬಳೆ `ಒಂದು ವಾರದೊಳಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸುವೆ’ ಎಂಬ ಭರವಸೆ ನೀಡಿದರು.

ShareSendTweetShare
Previous Post

ಮರಕ್ಕೆ ಗುದ್ದಿದ ಟೆಂಪೋ: 24 ಜನರಿಗೆ ಗಾಯ!

Next Post

ಹೊತ್ತಿ ಉರಿದ ದುಬಾರಿ ಬೈಕು: ಪ್ರವಾಸಕ್ಕೆ ಬಂದವನಿಗೆ ಪ್ರಯಾಸ!

Next Post

ಹೊತ್ತಿ ಉರಿದ ದುಬಾರಿ ಬೈಕು: ಪ್ರವಾಸಕ್ಕೆ ಬಂದವನಿಗೆ ಪ್ರಯಾಸ!

ಜಯ ಕರ್ನಾಟಕ | ಜನಪರ ವೇದಿಕೆ ಉಪಾಧ್ಯಕ್ಷರಿಗೆ ಶುಭಾಷಯಗಳ ಸುರಿಮಳೆ

ಬಾರು-ಸೊಸೈಟಿ ಮೇಲೆ ಕಣ್ಣು: ಕಿರವತ್ತಿಯಲ್ಲಿ ಸರಣಿ ಕಳ್ಳತನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.