ಶಿರಸಿ: ಸಂತ ರವಿದಾಸ ಸಮಾಜ ಅಭಿವೃದ್ಧಿ ಸಮಿತಿಯವರು ಭಾನುವಾರ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮದಿನ ಆಚರಿಸಿದರು. ದೇಶದ ಪ್ರಗತಿಗೆ ಸಾವಿತ್ರಿಬಾಯಿ ಫುಲೆ ಅವರು ನೀಡಿದ ಕೊಡುಗೆಗಳ ಬಗ್ಗೆ ಸ್ಮರಿಸಿದರು.
ಶಿರಸಿಯ ನೆಹರೂ ನಗರದ ಬಳಿ ಹುಬ್ಬಳಿ ್ಳರಸ್ತೆಗೆ ಹೊಂದಿಕೊoಡಿರುವ ಅಂಬೇಡ್ಕರ ಸಭಾ ಭವನದಲ್ಲಿ ಈ ಕಾರ್ಯಕ್ರಮ ನಡೆಯಿತು. `ಶತಮಾನಗಳ ಹಿಂದೆಯೇ ಮಹಿಳೆಯರ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಸಾಕ್ಷಾತ್ಕಾರ ಮಾಡಿದ ಸಾವಿತ್ರಿಬಾಯಿ ಫುಲೆ ಅವರಿಗೆ ಮಹಿಳೆಯರು ಸದಾ ಕೃತಜ್ಞರಾಗಿರಬೇಕು’ ಎಂದು ನಿವೃತ್ತ ಪ್ರಾಧ್ಯಾಪಕಿ ದಾಕ್ಷಾಯಣಿ ಪ್ರಭಾಕರ ಜೋಗಳೇಕರ ಹೇಳಿದರು.
ಶಿರಸಿ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಕುಮಾರ್ ಬೋರಕರ ಕಾರ್ಯಕ್ರಮ ಉದ್ಘಾಟಿಸಿದರು. ನಾಗರತ್ನಾ ಜೋಗಳೇಕರ ಅವರು ಸಾವಿತ್ರಿ ಬಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಂತ ರವಿದಾಸ ಸಮಾಜ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಘು ಗುತ್ತ್ಯಪ್ಪ ಕಾನಡೆ, ಪ್ರಭಾಕರ ಜೋಗಳೇಕರ, ವಿನಾಯಕ ನಾಯ್ಕ,ಮನುಜ ಪಾಲೇಕರ, ಸುಭಾಷ ಕಾನಡೆ ಸಾವಿತ್ರಿಬಾಯಿಯವರ ಜೀವನ, ಸಾಧನೆಯ ಕುರಿತು ಮಾತನಾಡಿದರು.
ಸಭೆಯಲ್ಲಿ ನಾರಾಯಣ ನೇತ್ರೆಕರ,ಶ್ವೇತಾ ಬೋರಕರ, ಮಾದೇವ ಪಾವಸ್ಕರ, ಭುಜಂಗ ಬೋರಕರ, ಶಾಂತಲಾ ಜೋಗಳೇಕರ,ವಿನಾಯಕ ಕಾನಡೆ, ಮಹೇಂದ್ರ ಮುರ್ಡೆಶ್ವರ, ಕಿಶೋರ ಜೋಗಳೇಕರ ಮುಂತಾದ ಅನೇಕ ಗಣ್ಯರು ಉಪಸ್ಥಿತರಿದ್ದರು ಸಭೆಯಲ್ಲಿ ನಾರಾಯಣ ನೇತ್ರೆಕರ, ಶ್ವೇತಾ ಬೋರಕರ, ಮಾದೇವ ಪಾವಸ್ಕರ, ಭುಜಂಗ ಬೋರಕರ, ಶಾಂತಲಾ ಜೋಗಳೇಕರ, ವಿನಾಯಕ ಕಾನಡೆ, ಮಹೇಂದ್ರ ಮುರ್ಡೆಶ್ವರ, ಕಿಶೋರ ಜೋಗಳೇಕರ ಇತರರು ಇದ್ದರು.





