ಯಲ್ಲಾಪುರ: ಹುಬ್ಬಳ್ಳಿ – ಅಂಕೋಲಾ ಹೆದ್ದಾರಿ ಅಂಚಿನಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಲಾರಿ ಗುದ್ದಿದೆ. ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಯಲ್ಲಾಪುರ ತೋಟಗಾರಿಕಾ ಇಲಾಖೆ ಕಚೇರಿ ಎದುರು ಈ ಅಪಘಾತ ನಡೆದಿದೆ. ಲಾರಿ ಗುದ್ದಿದ ರಭಸಕ್ಕೆ ನೂತನ ನಗರದ ಯಲ್ಲಪ್ಪ ಗಣಾಚಾರಿ (60) ಸ್ಥಳದಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.
ವಿಜಯಪುರದ ಶರಣಯ್ಯ ಹಿರೇಮಠ ಎಂಬಾತರು ಜನವರಿ 4ರ ಸಂಜೆ ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆ ಲಾರಿ ಓಡಿಸುತ್ತಿದ್ದರು. ಯಲ್ಲಾಪುರ ತೋಟಗಾರಿಕಾ ಕಚೇರಿ ಬಳಿ ಅವರು ಲಾರಿಯ ವೇಗ ಹೆಚ್ಚಿಸಿದ್ದು, ಇನ್ನೊಂದು ವಾಹನ ಹಿಂದಿಕ್ಕುವ ಬರದಲ್ಲಿ ತೀರಾ ಬಲ ಬದಿಗೆ ಲಾರಿ ಓಡಿಸಿದರು. ಆ ವೇಳೆ ರಸ್ತೆ ಅಂಚಿನಲ್ಲಿ ನಡೆದು ಹೋಗುತ್ತಿದ್ದ ಯಲ್ಲಪ್ಪ ಗಣಾಚಾರಿ ಅವರಿಗೆ ಲಾರಿ ಡಿಕ್ಕಿಯಾಯಿತು.
ನೆಲಕ್ಕೆ ಬಿದ್ದ ಯಲ್ಲಪ್ಪ ಗಣಾಚಾರಿ ಅವರ ತಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು. ಮೂಗಿನಿಂದ ರಕ್ತ ಸುರಿಯುತ್ತಿತ್ತು. ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯವು ಪ್ರಯತ್ನ ನಡೆದರೂ ಪ್ರಯೋಜನವಾಗಲಿಲ್ಲ. ಯಲ್ಲಪ್ಪ ಗಣಾಚಾರಿ ಅವರು ಹೆದ್ದಾರಿ ಅಂಚಿನಲ್ಲಿಯೇ ಹೊರಳಾಡಿ ಸಾವನಪ್ಪಿದರು.





