6
  • Latest
Memorizing Bhagavad Gita for three year old Pori!

ಮೂರು ವರ್ಷದ ಕೂಸಿಗೆ ಭಗವದ್ಗೀತೆ ಕಂಠಪಾಠ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಮೂರು ವರ್ಷದ ಕೂಸಿಗೆ ಭಗವದ್ಗೀತೆ ಕಂಠಪಾಠ!

AchyutKumar by AchyutKumar
in ಲೇಖನ, ವಿಡಿಯೋ
Memorizing Bhagavad Gita for three year old Pori!

ಯಲ್ಲಾಪುರ: ಸ್ವರ್ಣವಲ್ಲಿಯ ಗಂಗಾಧರೇ0ದ್ರ ಸರಸ್ವತಿ ಸ್ವಾಮೀಜಿ ರಾಜ್ಯದ ಎಲ್ಲಡೆ ಸಂಚರಿಸಿ ಭಗವದ್ಗೀತಾ ಅಭಿಯಾನ ನಡೆಸುತ್ತಿದ್ದಾರೆ. ಈ ಅಭಿಯಾನದ ಪರಿಣಾಮ ಜಡ್ಡಿಪಾಲಿನ ಪುಟ್ಟ ಬಾಲಕಿ ಶ್ರಾವಣಿ ಸಹ ನಿರರ್ಗಳವಾಗಿ ಭಗವದ್ಗೀತೆ ಉಚ್ಚರಿಸುತ್ತಾರೆ.

ADVERTISEMENT

ಯಲ್ಲಾಪುರ ತಾಲೂಕಿನ ದೆಹಳ್ಳಿ ಬಳಿಯ ಕಟ್ಟಿಗೆ ಗ್ರಾಮದಲ್ಲಿ ಗಣೇಶ ಜಡ್ಡಿಪಾಲ ಅವರು ವಾಸಿಸುತ್ತಾರೆ. ಅವರದ್ದು 15 ಜನರ ಅವಿಭಕ್ತ ಕುಟುಂಬ. ನಿತ್ಯ ಸಂಜೆ ಈ ಮನೆಯಲ್ಲಿ ಎಲ್ಲರೂ ಸೇರಿ ಭಜನೆ ಮಾಡುವುದು ಮೊದಲಿನಿಂದ ಬಂದ ಸಂಪ್ರದಾಯ. ಗಣೇಶ ಅವರ ಮೂರನೇ ಪುತ್ರಿ ಶ್ರಾವಣಿ ಈ ಮನೆಯ ಕಿರಿಯ ಸದಸ್ಯೆ. ಹೀಗಾಗಿ ಶ್ರಾವಣಿ ಮಲಗುವಾಗ ಶ್ಲೋಕ-ಭಜನೆ ಹೇಳುವುದು ಕಡ್ಡಾಯ!

ಭಗವದ್ಗೀತೆಯ ಅಭಿಯಾನದ ಅಂಗವಾಗಿ ಈಚೆಗೆ ಕಲ್ಪಾಲುವಿನಲ್ಲಿ ಭಗವದ್ಗೀತಾ ಸಪ್ತಾಹ ನಡೆಯಿತು. ಆ ಸಪ್ತಾಹದಲ್ಲಿ ಭಾಗವಹಿಸಿದ ಗಾಯತ್ರಿ ಜಡ್ಡಿಪಾಲ್ ಅವರು ತಮ್ಮ ಮೊಮ್ಮಗಳು ಶ್ರಾವಣಿಯನ್ನು ಜೊತೆಗೆ ಕರೆದೊಯ್ಯುತ್ತಿದ್ದರು. ಏಳು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರಾವಣಿ ಅವರಿಗೆ ಭಗವದ್ಗೀತೆ ಮನನವಾಯಿತು. ತಾಯಿ ಪಾರ್ವತಿ ಜಡ್ಡಿಪಾಲ್ ಅವರ ಜೊತೆ ಭಗವದ್ಗೀತೆ ಶ್ಲೋಕಗಳನ್ನು ಹೇಳುತ್ತಿದ್ದ ಪರಿಣಾಮ ಪುಠಾಣಿ ಶ್ರಾವಣಿ ಅವರಿಗೂ ಭಗವದ್ಗೀತೆ ಬಗ್ಗೆ ಅಪಾರ ಪ್ರೀತಿ ಬೆಳೆಯಿತು. ಅದರ ಪರಿಣಾಮವಾಗಿ ಭಗವದ್ಗೀತೆ 9ನೇ ಅಧ್ಯಾಯದ 27 ಶ್ಲೋಕಗಳನ್ನು ಅವರು ನಿರರ್ಗಳ ಹೇಳುತ್ತಾರೆ. ಉಳಿದ ಅಧ್ಯಾಯಗಳನ್ನು ಅಭ್ಯಯಿಸುವುದು ಸಹ ಅವರಿಗೆ ಅಷ್ಟೇ ಸಲೀಸು!

Advertisement. Scroll to continue reading.

ಇನ್ನೂ ಕಟ್ಟಿಗೆ ಗ್ರಾಮದಲ್ಲಿನ ಮಹಿಳಾ ಮಂಡಳದವರು ಕಾರ್ತಿಕ ಮಾಸದಲ್ಲಿ ವಾರಕ್ಕೆ ಒಮ್ಮೆ ಭಜನಾ ಕಾರ್ಯಕ್ರಮ ನಡೆಸುತ್ತಾರೆ. ಬೇರೆ ಬೇರೆಯವರ ಮನೆಗಳಿಗೆ ತೆರಳಿ ಗಂಟೆಗಳ ಕಾಲ ಭಜನೆ ಮಾಡುತ್ತಾರೆ. ಅಲ್ಲಿಯೂ ಪುಠಾಣಿ ಶ್ರಾವಣಿ ಜಡ್ಡಿಪಾಲ್ ಅವರ ಹಾಜರಾತಿ ಇದ್ದೇ ಇರುತ್ತದೆ. ಹೀಗಾಗಿ ಶ್ರಾವಣಿ ಅವರಿಗೆ ಗಣೇಶ ಪಂಚರತ್ನ, ಶಾರದಾ ಭುಜಂಗ ಸ್ತೋತ್ರ, ಗುರು ಅಷ್ಟಕ ಸೇರಿ ಹಲವು ಬಗೆಯ ಶ್ಲೋಕಗಳು ಕಂಠಪಾಠವಾಗಿದೆ. `ಸ್ವರ್ಣವಲ್ಲಿ ಶ್ರೀಗಳು ನಡೆಸಿದ ಭಗವದ್ಗೀತಾ ಅಭಿಯಾನ ಮಗುವಿನ ಮೇಲೆ ಅಗಾದವಾದ ಪ್ರಭಾವ ಬೀರಿದೆ’ ಎಂದು ಶ್ರಾವಣಿ ಅವರ ತಂದೆ ಗಣೇಶ ಜಡ್ಡಿಪಾಲ್ ಅನಿಸಿಕೆ ಹಂಚಿಕೊoಡರು.
ತುಳಸಿ ಮಾಲೆ ಕಟ್ಟುತ್ತ ಭಗವದ್ಗೀತೆ ಹೇಳಿಕೊಡುವ ಪುಠಾಣಿ ಶ್ರಾವಣಿಯ ವಿಡಿಯೋ ಇಲ್ಲಿ ನೋಡಿ..

Advertisement. Scroll to continue reading.
Previous Post

ಅಕ್ರಮ ಎತ್ತು ಸಾಗಾಟ | ಅಲ್ಲಿ ಇಲ್ಲಿ ತಪ್ಪಿಸಿಕೊಂಡವರು ಇಲ್ಲಿ ಸಿಕ್ಕಿಬಿದ್ದರು!

Next Post

ಕಾಳಿ-ಶರಾವತಿ-ಅತ್ತಿವೇರಿ: ಇಲ್ಲಿ ಅಭಿವೃದ್ಧಿಗೂ ಮುನ್ನ ಅನುಮತಿ ಕಡ್ಡಾಯ!

Next Post

ಕಾಳಿ-ಶರಾವತಿ-ಅತ್ತಿವೇರಿ: ಇಲ್ಲಿ ಅಭಿವೃದ್ಧಿಗೂ ಮುನ್ನ ಅನುಮತಿ ಕಡ್ಡಾಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ