ಶಿರಸಿ: ಕಳ್ಳ ನಾಟಾ ಸಾಗಿಸುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ನಾಟಾ ಜೊತೆ ಇಬ್ಬರು ಸಿಕ್ಕಿ ಬಿದ್ದಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರ ಬಳಿಯ ಕಾಗಲ್’ನ ಮಾದೇವ ರಾಮಚಂದ್ರ ವಡ್ಡಾ ಹಾಗೂ ಶಿರಸಿ ನಗರದ ಕೊಪ್ಪಳ ಕಾಲೋನಿಯ ಜಗದೀಶ ಮಾದೇವ ಗುಡಿಗಾರ ಅಕ್ರಮ ನಾಟಾ ಸಾಗಿಸುತ್ತಿದ್ದರು. ಈ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದರು. ಚಂದನ್ ವುಡ್ ವರ್ಕ್ಸ್ ಹಾಗೂ ಫರ್ನಿಚರ್ ಬಳಿ ಈ ಇಬ್ಬರು ಸಿಕ್ಕಿಬಿದ್ದರು.
ಅವರ ಲಾರಿ ತಪಾಸಣೆ ನಡೆಸಿದಾಗ ಅಕೆಶಿಯಾ ಕಡಿದು ಸಾಗಿಸುತ್ತಿರುವುದು ಕಂಡು ಬಂದಿತು. ಅದಕ್ಕೆ ಯಾವುದೇ ಅನುಮತಿ ಪತ್ರಗಳು ಇರಲಿಲ್ಲ. ಹೀಗಾಗಿ ಲಾರಿ ಜೊತೆ 92 ನಾಟಾವನ್ನು ಸಹ ಅಧಿಕಾರಿಗಳು ವಶಕ್ಕೆ ಪಡೆದರು. ಅಂದಾಜು 3 ಲಕ್ಷ ರೂ ಬೆಲೆಯ ನಾಟಾ ಇದಾಗಿದೆ.




