ಭಟ್ಕಳ: ಮೀನುಗಾರಿಕೆಗೆ ತೆರಳಿದ ಮೀನು ಕಾರ್ಮಿಕ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ.
ತೆಂಗಿನಗುoಡಿಯಲ್ಲಿ ವಾಸವಾಗಿರುವ ಛತ್ತಿಸಘಡದ ಪಂಕಜ್ ಭರತ್ `ವೈಲಂಕಿನಿ’ ಬೋಟಿನಲ್ಲಿ ಕೆಲಸಕ್ಕಿದ್ದರು. ಜನವರಿ 8ರಂದು ಅವರು ಬೋಟಿನಲ್ಲಿ ಮೀನು ಹಿಡಿಯಲು ಹೋಗಿದ್ದರು.
ADVERTISEMENT
ಊಟ ಮುಗಿಸಿ ಕೈ ತೊಳೆಯುವಾಗ ಅವರು ಸಮುದ್ರಕ್ಕೆ ಬಿದ್ದಿದ್ದು, ಆ ವೇಳೆ ಎಷ್ಟು ಹುಡುಕಿದರೂ ಸಿಗಲಿಲ್ಲ. ಜನವರಿ 9ರಂದು ಅವರ ಶವ ಸಮುದ್ರ ದಡದಲ್ಲಿ ಸಿಕ್ಕಿದೆ.





