ಕುಮಟಾ: ಕರ್ಕಶ ಶಬ್ದದೊಂದಿಗೆ ಚಲಿಸುವ ಬೈಕುಗಳನ್ನು ಹಿಡಿದ ಪೊಲೀಸರು ಬೈಕಿನ ಸೈಲೆನ್ಸರ್ ಕಿತ್ತು ರಾಶಿ ಹಾಕಿದ್ದಾರೆ. ಕಂಪನಿ ನೀಡಿದ ಸೈಲೆನ್ಸರ್ ಬದಲಿಸಿ ಬೇರೆ ಸೈಲೆನ್ಸರ್ ಅಳವಡಿಸಿಕೊಂಡಿದ್ದ ಪಡ್ಡೆ ಹುಡುಗರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಅನೇಕರು ಶಾಲೆ-ಕಾಲೇಜು ಮುಂದೆ ದೊಡ್ಡ ಸದ್ದಿನ ಬೈಕ್ ಓಡಿಸುತ್ತಿದ್ದರು. ಆಸ್ಪತ್ರೆಗಳ ಮುಂದೆ ಸಹ ಭಾರೀ ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದರು. ಇದನ್ನು ಗಮನಿಸಿದ ಸಿಪಿಐ ಯೋಗೀಶ 15 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಹಲವು ಬೈಕು ಸವಾರರಿಗೆ ಬಿಸಿ ಮುಟ್ಟಿಸಿದರು. ಸಿಕ್ಕಿಬಿದ್ದವರಿಗೆಲ್ಲ ಸಂಚಾರಿ ನಿಯಮದ ಬಗ್ಗೆ ಅರಿವು ಮೂಡಿಸಿದರು.
ಪಿಎಸ್ಐ ಮಂಜುನಾಥ ಗೌಡ, ರವಿ ಗುಡ್ಡಿ, ಸಾವಿತ್ರಿ ನಾಯಕ ಜೊತೆ ಪೊಲೀಸ್ ಸಿಬ್ಬಂದಿ ಸೇರಿ ನಿಯಮ ಉಲ್ಲಂಘಿಸುವವರ ಬಳಿ ದಂಡ ವಸೂಲಿ ಮಾಡಿದರು. ಈ ಬಗ್ಗೆ ಪ್ರಕರಣವನ್ನು ದಾಖಲಿಸಿ ವರದಿ ಸಲ್ಲಿಸಿದರು. `ಪಟ್ಟಣದಲ್ಲಿ ಈ ಪ್ರಕ್ರಿಯೆ ಇನ್ನು ನಿರಂತರವಾಗಿ ನಡೆಯಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.




