ಮುಂಡಗೋಡ: ಮಳಗಿ – ದಾಸನಕೊಪ್ಪ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಗೆ ಬೈಕ್ ಗುದ್ದಿದ ಪರಿಣಾಮ ಬೈಕ್ ಸವಾರ ಮಹೇಶ ಶೃಂಗೇರಿ ಸಾವನಪ್ಪಿದ್ದಾರೆ.
ಮುಂಡಗೋಡು ಕಲಹಕ್ಕಲದ ಮಹೇಶ ಶೃಂಗೇರಿ ಜನವರಿ 11ರ ಸಂಜೆ ಮಳಗಿ – ದಾಸನಕೊಪ್ಪ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸುತ್ತಿದ್ದರು. ಇದೇ ರಸ್ತೆಯಲ್ಲಿ ಮಳಗಿ ಸಿದ್ದಾಪುರ ಓಣಿಯ ಅಪ್ತಾಬ ಶೇಖ್ ಸಹ ಲಾರಿ ಓಡಿಸುತ್ತಿದ್ದರು. ಆ ಲಾರಿಗೆ ಯಾವುದೇ ಸಿಗ್ನಲ್, ಬೆಳಕು ಇರಲಿಲ್ಲ.
ಹೀಗಾಗಿ ಮುಂದಿನಿoದ ಲಾರಿ ಹೋಗುವುದನ್ನು ಗಮನಿಸದ ಮಹೇಶ್ ಆ ಲಾರಿಗೆ ಬೈಕ್ ಗುದ್ದಿದರು. ತಲೆ ಹಾಗೂ ಕುತ್ತಿಗೆಗೆ ಭಾರೀ ಪ್ರಮಾಣದಲ್ಲಿ ಗಾಯವಾಗಿದ್ದರಿಂದ ಮಹೇಶ ಶೃಂಗೇರಿ ಅಲ್ಲಿಯೇ ಸಾವನಪ್ಪಿದರು.
ಇದರೊಂದಿಗೆ ಬೈಕಿನಲ್ಲಿ ಹಿಂದೆ ಕೂತಿದ್ದ ಪ್ರಶಾಂತ ಕುರುಬರ ಸಹ ಗಾಯಗೊಂಡಿದ್ದಾರೆ. ಪೊಲೀಸ್ ಪ್ರಕರಣ ದಾಖಲಾಗಿದೆ.




