ಅoಕೋಲಾ: ತೋಟ-ಗದ್ದೆ-ಮನೆಗಳಿಗೆ ದೃಷ್ಠಿ ಬೀಳಬಾರದು ಎಂದು ದೃಷ್ಠಿ ಬೊಂಬೆ ಹಾಕುವುದು ಸಾಮಾನ್ಯ. ಆದರೆ, ಇದೀಗ ಕರಾವಳಿಯಲ್ಲಿ ದೃಷ್ಠಿ ಬೊಂಬೆ ಬದಲು ಮಹಿಳೆಯೊಬ್ಬರ ಫೋಟೋಗೆ ಭಾರೀ ಬೇಡಿಕೆ ಬಂದಿದೆ!
ಆ ಮಹಿಳೆ ಯಾರು? ಎಲ್ಲಿಯವರು? ಎಂದು ಯಾರಿಗೂ ಗೊತ್ತಿಲ್ಲ. ಆಕೆಯ ದೊಡ್ಡ ಕಣ್ಣುಗಳನ್ನು ನೋಡಿದ ಜನ ಒಮ್ಮೆಗೆ ಬೆಚ್ಚಿ ಬೀಳುತ್ತಿದ್ದಾರೆ. ಅಂಕೋಲಾದ ಕಲ್ಲಂಗಡಿ ಬೆಳೆಗಾರರು ತಮ್ಮ ಹೊಲದಲ್ಲಿ ಈ ಮಹಿಳೆಯ ಫೋಟೋ ಹಾಕಿದ್ದಾರೆ. ಗೋಕರ್ಣ ಬಸ್ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಮೇಲ್ಬಾಗದಲ್ಲಿಯೂ ಆ ಮಹಿಳೆಯ ಫೋಟೋ ಕಾಣಿಸಿಕೊಂಡಿದೆ.
ರಸ್ತೆ ಮೇಲೆ ಓಡಾಡುವ ಬಹುತೇಕರು ಮಹಿಳೆಯ ಫೋಟೋ ನೋಡಿ, ಫೋಟೋ ತೆಗೆಯುತ್ತಿದ್ದಾರೆ. ಚಿಕ್ಕ ಮಕ್ಕಳು ಫೋಟೋ ನೋಡಿ ಭಯಗೊಂಡಿದ್ದಾರೆ. ಗೋಕರ್ಣಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ಬಂದ ಮಕ್ಕಳು ಫೋಟೋ ನೋಡಿ ಓಡಿದ್ದು, ಆ ಮಹಿಳೆಯ ಫೋಟೋ ನೋಡಿದ ಚಿಕ್ಕ ಮಗು ಅಳುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.




