6
  • Latest

ಗೋಕರ್ಣದ ಅಳಿಯ ಕೆನಡಾದ ಪ್ರಧಾನಿ ಆಕಾಂಕ್ಷಿ!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ADVERTISEMENT
  • Home
Saturday, July 25, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಗೋಕರ್ಣದ ಅಳಿಯ ಕೆನಡಾದ ಪ್ರಧಾನಿ ಆಕಾಂಕ್ಷಿ!

AchyutKumar by AchyutKumar
in ದೇಶ - ವಿದೇಶ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಅಳಿಯ ಚಂದ್ರ ಆರ್ಯ ಕೆನಡಾ ಪ್ರಧಾನಿ ಆಗುವ ಸಾಧ್ಯತೆ ಹೆಚ್ಚಿದೆ. `ತಾನು ಪ್ರಧಾನಿ ಆಕಾಂಕ್ಷಿ’ ಎಂದು ಚಂದ್ರ ಆರ್ಯ ಹೇಳಿಕೊಂಡಿದ್ದಾರೆ.

ಚoದ್ರ ಆರ್ಯ ಅವರು ತುಮಕೂರು ಜಿಲ್ಲೆಯವರು. ಅಲ್ಲಿನ ದ್ವಾರಲು ಗ್ರಾಮದಲ್ಲಿ ಜನಿಸಿದ ಅವರು ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ ಬಿ ಎ ಕಲಿತರು. 2006ರಲ್ಲಿ ಅವರು ಕೆನಡಾಗೆ ತೆರಳಿದರು. ಇಂಡೋ-ಕೆನಡಾ ಒಟ್ಟಾವಾ ಬ್ಯುಸಿನೆಸ್’ನ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದಾರೆ. 2015ರಲ್ಲಿ ಫೆಡರಲ್ ಚುನಾವಣೆಗೆ ಸ್ಪರ್ಧಿಸಿದ ಅವರು ನೇಪಿಯನ್ ರೈಡಿಂಗ್ ಸಂಸದರಾದರು. ಅವರ ಕೆಲಸ ಮೆಚ್ಚಿದ ಜನ 2019 ಹಾಗೂ 2021ರಲ್ಲಿ ಸಂಸದರಾಗಿ ಮರು ಆಯ್ಕೆ ಮಾಡಿದರು.

ಕೆನಡಾದ ರಾಜಕಾರಣದಲ್ಲಿ ಚಂದ್ರ ಆರ್ಯ ಅತ್ಯಂತ ಚುರುಕಾಗಿದ್ದಾರೆ. 2022ರಲ್ಲಿ ಕೆನಡಾದಲ್ಲಿ ಕನ್ನಡ ಭಾಷೆಯಲ್ಲಿ ಅವರು ಭಾಷಣ ಮಾಡಿದ್ದರು. ಟೆರೆಂಟೋದಲ್ಲಿನ ಹಿಂದೂ ದೇವಾಲಯದ ಧ್ವಂಸ ಪ್ರಕರಣಗಳಲ್ಲಿಯೂ ಅವರು ಧ್ವನಿ ಎತ್ತಿದ್ದರು. ಚಂದ್ರ ಆರ್ಯ ಅವರ ಪತ್ನಿ ಸಂಗೀತ ಗಾಯತ್ರಿ ಅವರು ಗೋಕರ್ಣದ ಗೋಪಾಲ ಗಾಯತ್ರಿ ಅವರ ಪುತ್ರಿ. ಗೋಪಾಲ ಗಾಯತ್ರಿ ಅವರು ದಾಂಡೇಲಿಯಲ್ಲಿ ಉಪನ್ಯಾಸಕರಾಗಿದ್ದು, ಸಂಗೀತ ಗಾಯತ್ರಿ ಅವರು ಸಹ ಶಿಕ್ಷಕರಾಗಿ ಸೇವೆಯಲ್ಲಿದ್ದರು. ಸಂಗೀತ ಗಾಯತ್ರಿ ಅವರು ತಮ್ಮ ಬಾಲ್ಯವನ್ನು ಜಿಲ್ಲೆಯಲ್ಲಿ ಕಳೆದಿದ್ದಾರೆ. ವರ್ಷಕ್ಕೆ ಒಂದೆರಡು ಬಾರಿ ಅವರು ಈ ನೆಲ ಸ್ಪರ್ಶಿಸುತ್ತಾರೆ. ಪತಿ ಸಂಸದರಾಗಿದ್ದರೂ ಸಂಗೀತ ಅವರು ಕೆನಡಾದಲ್ಲಿ ಶಿಕ್ಷಕ ವೃತ್ತಿ ಬಿಟ್ಟಿಲ್ಲ.

ಇದೀಗ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ರಾಜೀನಾಮೆ ನಂತರ ಚಂದ್ರ ಆರ್ಯ ಅವರು ಪ್ರಧಾನಿ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ.

ShareSendTweetShare
Previous Post

ಅರಣ್ಯ ಅತಿಕ್ರಮಣ | ಮೂರು ತಲೆಮಾರಿನ ದಾಖಲೆ ವಿರೋಧಿಸಿ ಮೂರು ಸಾವಿರ ಜನರ ಪ್ರತಿಭಟನೆ!

Next Post

ಅರಣ್ಯ ಭೂಮಿ ಹಕ್ಕು | ಕಾನೂನು ತಿದ್ದುಪಡಿಗಾಗಿ ಪ್ರಧಾನಿಗೆ ಪತ್ರ ಅಭಿಯಾನ!

Next Post

ಅರಣ್ಯ ಭೂಮಿ ಹಕ್ಕು | ಕಾನೂನು ತಿದ್ದುಪಡಿಗಾಗಿ ಪ್ರಧಾನಿಗೆ ಪತ್ರ ಅಭಿಯಾನ!

ಮೂರು ದಿನಕ್ಕೆ ಒಮ್ಮೆ ಮನೆಗೆ ಬರುತ್ತಿದ್ದ ಹಮಾಲಿ: ನಶೆಯಲ್ಲಿಯೇ ಹಾರಿಹೊಯ್ತು ಪ್ರಾಣ ಪಕ್ಷಿ!

ಬೈಕಿಗೆ ಗುದ್ದಿದ ಬೈಕು: ಆಸ್ಪತ್ರೆ ಸೇರಿದ ಕೇಬಲ್ ಆಪರೇಟರ್!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.