ಕುಮಟಾ: ಅಲ್ಲಿ-ಇಲ್ಲಿ ಹಮಾಲಿ ಮಾಡಿ ಬದುಕು ಕಂಡಿಕೊ0ಡಿದ್ದ ಸುಬ್ರಾಯ ಗಾಡಿಗ ಸಿಕ್ಕ ಕಾಸನ್ನೆಲ್ಲ ಸರಾಯಿ ಅಂಗಡಿಗೆ ಚೆಲ್ಲುತ್ತಿದ್ದರು. ಕೊನೆಗೆ ಮದ್ಯದ ಅಂಗಡಿ ಮುಂದೆ ಅವರು ಸಾವನಪ್ಪಿದರು.
ಕುಮಟಾ ಹೊಸಹೆರವಟ್ಟಾದ ನೀರಕೆರೆ ಸುಬ್ರಾಯ ಗಾಡಿಗ 38ನೇ ವರ್ಷಕ್ಕೆ ಕೊನೆ ಉಸಿರೆಳೆದಿದ್ದಾರೆ. ಅವರಿಗಿದ್ದ ವಿಪರೀತ ಸರಾಯಿ ಸೇವನೆಯೇ ಈ ಸಾವಿಗೆ ಕಾರಣವಾಗಿದೆ. ಹಮಾಲಿ ಕೆಲಸ ಮಾಡಿ ನಾಲ್ಕು ಕಾಸು ಸಂಪಾದಿಸುತ್ತಿದ್ದ ಅವರು ನಿತ್ಯ ಮನೆಗೆ ಹೋಗುತ್ತಿರಲಿಲ್ಲ. ಸರಿ ಸುಮಾರು ಮೂರು ದಿನಕ್ಕೆ ಒಮ್ಮೆ ಮನೆಗೆ ಹೋಗಿ ಬರುತ್ತಿದ್ದ ಅವರು ಸರಾಯಿ ಅಂಗಡಿ ಆಸುಪಾಸಿನಲ್ಲಿಯೇ ದಿನ ಕಳೆಯುತ್ತಿದ್ದರು.
ರಾತ್ರಿ ವೇಳೆ ಸಹ ಮದ್ಯದ ನಶೆಯಲ್ಲಿ ಎಲ್ಲೆಂದರಲ್ಲಿ ಮಲಗುತ್ತಿದ್ದರು. ಹೀಗೆ ಜನವರಿ 11ರಂದು ರಾತ್ರಿ 10.30ಕ್ಕೆ ಸಹ ಅವರು ಸ್ವಸ್ತಿಕ್ ಬಾರ್ ಬಳಿ ಅಲೆದಾಡುತ್ತಿದ್ದರು. ಬಾರಿನ ಹೊರಗಡೆ ಜನರೇಟರ್ ಇಡುವ ಸ್ಥಳದಲ್ಲಿ ಹಿಮ್ಮುಖವಾಗಿ ಬಿದ್ದ ಅವರು ಇಂಟರ್ಲಾಕ್’ಗೆ ತಲೆ ಬಡೆದುಕೊಂಡರು. ಮದ್ಯದ ನಶೆಯಲ್ಲಿರುವಾಗಲೇ ಅವರು ಸಾವನಪ್ಪಿದರು. ಈ ಬಗ್ಗೆ ಅವರ ಅಣ್ಣ ದತ್ತಾತ್ರೇಯ ಗಾಡಿಗ ಪೊಲೀಸ್ ದೂರು ನೀಡಿ, ಪ್ರಕರಣ ದಾಖಲಿಸಿದ್ದಾರೆ.
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ




