ಯಲ್ಲಾಪುರ: ಬಸವೇಶ್ವರ ಸರ್ಕಲ್ ಬಳಿಯಿರುವ ಕ್ರಿಯೇಟಿವ್ ತರಬೇತಿ ಕೇಂದ್ರದಲ್ಲಿ ಚಿತ್ರಕಲಾ ಶಿಬಿರ ಶುರುವಾಗಿದೆ.
ಪ್ರತಿ ಶನಿವಾರ ಮಧ್ಯಾಹ್ನ ಹಾಗೂ ಭಾನುವಾರ ಬೆಳಗ್ಗೆ ಈ ವಿಶೇಷ ಶಿಬಿರ ನಡೆಯಲಿದೆ. 1ನೇ ತರಗತಿ ಮೇಲ್ಪಟ್ಟ ಯಾರೂ ಬೇಕಾದರೂ ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು, ನುರಿತ ಶಿಕ್ಷಕರು ಸಂಪೂರ್ಣ ತರಬೇತಿ ನೀಡಲಿದ್ದಾರೆ.
ಪತ್ರಕರ್ತೆ ಪ್ರಭಾ ಜಯರಾಜ್ ಈ ತರಗತಿ ಉದ್ಘಾಟಿಸಿದರು. ವೈಟಿಎಸ್ಎಸ್ ಇಂಗ್ಲಿಷ್ ಮಾಧ್ಯಮದ ಪ್ರಾಚಾರ್ಯೆ ಶೈಲಜಾ ಮಪ್ಸೇಕರ್, ಎಂಎಚ್ಪಿಎಸ್ ಮಾಡನ್ ಶಾಲೆಯ ಪ್ರಾಚಾರ್ಯೆ ಅನುಸೂಯ ಹಾರ್ವಾಡೇಕರ್, ಕಲಾವಿದ ಸಂತೋಷ ಗಾಡಿಗ, ಕ್ರಿಯೇಟಿವ್ ಕಂಪ್ಯೂಟರ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀನಿವಾಸ್ ಮುರುಡೇಶ್ವರ ಇದ್ದರು.
ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಕಿಟ್ ವಿತರಿಸಿದರು. ಶೀಲಾ ಸಂಘಡಿಗರು ಸ್ವಾಗತ ಗೀತೆ ಹಾಡಿದರು. ಸಿಮ್ರಾನ್ ಶೇಕ್ ಸ್ವಾಗತಿಸಿದರು. ಶಾಲಿನಿ ಮುರ್ಡೇಶ್ವರ ನಿರ್ವಹಿಸಿದರು. ಅರ್ಚನಾ ಕಂಡೆಕರ್ ವಂದಿಸಿದರು.
ಚಿತ್ರಕಲಾ ಶಿಬಿರಕ್ಕೆ ಹೆಸರು ನೋಂದಾಯಿಸಲು ಇಲ್ಲಿ ಫೋನ್ ಮಾಡಿ: 9986716721




