ಕಾರವಾರ: ಅರಬ್ಬಿ ಸಮುದ್ರದ ನಡುವಿನ ದ್ವೀಪ ಕೂರ್ಮಗಡದಲ್ಲಿ ಸೋಮವಾರ ನಡೆದ ಜಾತ್ರೆಗೆ ದೇಶದ ನಾನಾ ಭಾಗದ ಭಕ್ತರು ಬಂದಿದ್ದು, ಇಡೀ ದಿನ ಮೀನುಹಾರರ ಆರಾಧ್ಯ ದೇವ ನರಸಿಂಹ ಸ್ವಾಮಿಯ ಆರಾಧನೆ ನಡೆಯಿತು. ಸಾವಿರಾರು ಸಂಖ್ಯೆಯ ಭಕ್ತರು ದೋಣಿಗಳ ಮೂಲಕ ದ್ವೀಪಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ಇಷ್ಟವಾದ ಬಾಳೆಗೊನೆಗಳನ್ನು ಸಲ್ಲಿಸಿ ಹರಕೆ ತೀರಿಸಿದರು.
ಅನಾದಿಕಾಲದಿಂದಲೂ ನಡೆದುಕೊಂದು ಬಂದoತೆ ನರಸಿಂಹ ದೇವರ ಉತ್ಸವ ಮೂರ್ತಿಯನ್ನು ಸೋಮವಾರ ಕಡವಾಡದಿಂದ ದೋಣಿಯ ಮೂಲಕ ಕೂರ್ಮಗಡಕ್ಕೆ ಸಾಗಿಸಲಾಯಿತು. ಅಲ್ಲಿನ ಗುಡಿಯಲ್ಲಿ ದೇವರನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ಬೆಳಗ್ಗೆ ಉತ್ಸವ ಮೂರ್ತಿಯನ್ನು ದೊಣಿಯ ಮೂಲಕ ಮರಳಿ ಕಡವಾಡಕ್ಕೆ ತರಲಾಗುತ್ತದೆ.
ಬೋಟಿನಲ್ಲಿ ಸಂಚರಿಸಿದ ಭಕ್ತರು ದ್ವೀಪದ ಎಲ್ಲಾ ಕಡೆ ಸುತ್ತಾಡಿ ಖುಷಿ ಅನುಭವಿಸಿದರು. ಗೋವಾ-ಮಹಾರಾಷ್ಟç ಸೇರಿ ನಾನಾ ಭಾಗದ ಭಕ್ತರು ಆಗಮಿಸಿದ್ದರು. ಮೀನುಗಾರ ಸಮುದಾಯರವರು ನರಸಿಂಹ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಜಾತ್ರೆಗೆ ತೆರಳಲು ಭಕ್ತರಿಗೆ ನಗರದ ಬೈತಖೋಲ್ ಮೀನುಗಾರಿಕೆ ಬಂದರಿನಿoದ ಬೋಟ್ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಮೀನುಗಾರರು ಹರಕೆ ರೂಪದಲ್ಲಿ ಭಕ್ತರನ್ನು ಉಚಿತವಾಗಿ ಬೋಟ್ ಮೂಲಕ ಕರೆದೊಯ್ದರು.




