ಕಾರವಾರ: `ಬಿಣಗಾದ ಗ್ರಾಸೀಂ ಇಂಡಸ್ಟಿಯಲ್ಲಿ ಕ್ಲೋರಿನ್ ಸೋರಿಕೆಯಿಂದ ಕಾರ್ಮಿಕರು ಅಸ್ವಸ್ಥಗೊಂಡಿದನ್ನು ಮನಗಂಡು ಘಟಕದಲ್ಲಿ ಹೆಚ್ಚಿನ ಸುರಕ್ಷತೆಕೈಗೊಳ್ಳಬೇಕು’ ಎಂದು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರವಾರ ಘಟಕ ಅಧ್ಯಕ್ಷ ರಾಜಾ ನಾಯ್ಕ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಇಮೇಲ್ ಹಾಗೂ ವಾಟ್ಸಪ್ ಮಾಡಿರುವ ಅವರು `ಶನಿವಾರ ನಡೆದ ದುರಂತದಿAದ 19 ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಕಂಪನಿ ನಿರ್ಲಕ್ಷದಿಂದ ಈಚೆಗೆ ಸಾಕಷ್ಟು ಸಾವು-ನೋವು ಉಂಟಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು’ ಎಂದು ಹೇಳಿದ್ದಾರೆ. `ಕಾರ್ಮಿಕರ ಹಿತ ಕಾಪಾಡುವಲ್ಲಿ ಕಂಪನಿ ಆಸಕ್ತಿವಹಿಸಿಲ್ಲ ಎಂದು ಅಲ್ಲಿನ ಸಿಬ್ಬಂದಿ ದೂರಿದ್ದು, ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನಿಸಬೇಕು’ ಎಂದವರು ಆಗ್ರಹಿಸಿದ್ದಾರೆ.
`ಕಾರವಾರ ಬಿಣಗಾ ಗ್ರಾಮದಲ್ಲಿರುವ ಆದಿತ್ಯ ಬಿರ್ಲಾ ಕಂಪನಿಗೆ 50 ವರ್ಷದ ಇತಿಹಾಸವಿದೆ. ಹೊರರಾಜ್ಯದಲ್ಲಿಯೂ ಈ ಕಂಪನಿ ಹೆಸರುಪಡೆದಿದ್ದು, 500ಕ್ಕೂ ಅಧಿಕ ಕಾರ್ಮಿಕರು ಇಲ್ಲಿದ್ದಾರೆ. ಪದೇ ಪದೇ ಅನೀಲ ಸೋರಿಕೆ ಆಗುವುದರಿಂದ ಜನ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಸಾವು-ನೋವಿನ ನಂತರ ಪರಿಹಾರ ನೀಡುವ ಬದಲು ಮೊದಲೇ ಎಚ್ಚರಿಕೆವಹಿಸಬೇಕು. ಈ ಬಗ್ಗೆ ಜನಪ್ರತಿನಿಧಿಗಳು ಗಮನಿಸಬೇಕು’ ಎಂದವರು ಆಗ್ರಹಿಸಿದ್ದಾರೆ.




